ಬಿಜೆಪಿಯನ್ನು ಸೋಲಿಸಲು ಮೋದಿ ವಿರುದ್ಧದ ಸ್ಪರ್ಧೆಯಿಂದ ಹಿಂದೆ ಸರಿದ ಭೀಮ್ ಆರ್ಮಿಯ ಚಂದ್ರಶೇಖರ್ ಆಝಾದ್
ಹೊಸದಿಲ್ಲಿ, ಎ.17: ದಲಿತರ ಮತಗಳು ವಿಭಜನೆಯಾಗಬಾರದು ಮತ್ತು ಬಿಜೆಪಿಯನ್ನು ಸೋಲಿಸಬೇಕು ಎನ್ನುವ ಉದ್ದೇಶದಿಂದ ವಾರಣಾಸಿಯಲ್ಲಿ ನರೇಂದ್ರ ಮೋದಿ ವಿರುದ್ಧದ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದು, ಎಸ್ಪಿ-ಬಿಎಸ್ಪಿ ಮೈತ್ರಿಯನ್ನು ಬೆಂಬಲಿಸುವುದಾಗಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ ತಿಂಗಳ ನಂತರ ಇದೀಗ ಅವರು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ದಲಿತ ವೋಟುಗಳನ್ನು ವಿಭಜಿಸುವ ಚಂದ್ರಶೇಖರ್ ಆಝಾದ್ ಬಿಜೆಪಿ ಏಜೆಂಟ್ ಎಂದು ಈ ಹಿಂದೆ ಮಾಯಾವತಿ ಆರೋಪಿಸಿದ್ದರು.
Next Story