ಭಯೋತ್ಪಾದನೆ ಆರೋಪಿಯನ್ನು ನಾನು ಕಣಕ್ಕಿಳಿಸಿದ್ದರೆ ಮಾಧ್ಯಮಗಳು ಏನು ಹೇಳುತ್ತಿತ್ತು: ಮೆಹಬೂಬಾ ಮುಫ್ತಿ ಪ್ರಶ್ನೆ
ಸಾಧ್ವಿ ಪ್ರಜ್ಞಾ ಸಿಂಗ್ ಗೆ ಟಿಕೆಟ್ ನೀಡಿದ ಬಿಜೆಪಿ ವಿರುದ್ಧ ಆಕ್ರೋಶ
ಹೊಸದಿಲ್ಲಿ, ಎ.17: ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಗೆ ಬಿಜೆಪಿ ಟಿಕೆಟ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಭಯೋತ್ಪಾದನೆ ಆರೋಪಿಯನ್ನು ತನ್ನ ಪಕ್ಷವು ಕಣಕ್ಕಿಳಿಸಿದ್ದರೆ ಮಾಧ್ಯಮಗಳು ತನ್ನ ಮೇಲೆ ದಾಳಿ ನಡೆಸುತ್ತಿದ್ದವು ಎಂದಿದ್ದಾರೆ.
“ನಾನು ಭಯೋತ್ಪಾದನೆ ಆರೋಪಿಯನ್ನು ಕಣಕ್ಕಿಳಿಸಿದ್ದರೆ ವ್ಯಕ್ತವಾಗಬಹುದಿದ್ದ ಕೋಪವನ್ನು ಊಹಿಸಿಕೊಳ್ಳಿ. ಚಾನೆಲ್ ಗಳಲ್ಲಿ ಮೆಹಬೂಬಾಮುಫ್ತಿ ಟೆರರಿಸ್ಟ್ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗುತ್ತಿತ್ತು” ಎಂದು ಮುಫ್ತಿ ಟ್ವೀಟ್ ಮಾಡಿದ್ದಾರೆ.
“ಇವರ ಪ್ರಕಾರ ಕೇಸರಿ ಮತಾಂಧರ ವಿಷಯದಲ್ಲಿ ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ. ಆದರೆ ಮುಸ್ಲಿಮರೆಲ್ಲರೂ ಉಗ್ರರು. ಮುಗ್ಧರೆಂದು ಸಾಬೀತಾಗುವವರೆಗೂ ತಪ್ಪಿತಸ್ಥರು” ಎಂದು ಮುಫ್ತಿ ಹೇಳಿದ್ದಾರೆ.
Next Story