ದಿಲ್ಲಿಯಲ್ಲಿ ಬಿಜೆಪಿಯ ರಾಜ್ಯಸಭಾ ಸದಸ್ಯ ನರಸಿಂಹ ರಾವ್ ಮೇಲೆ ಶೂ ಎಸೆತ
ಹೊಸದಿಲ್ಲಿ, ಎ.18: ದಿಲ್ಲಿಯಲ್ಲಿ ಬಿಜೆಪಿಯ ವಕ್ತಾರ ರಾಜ್ಯಸಭಾ ಸದಸ್ಯ ಜಿವಿಎಲ್ ನರಸಿಂಹ ರಾವ್ ಮೇಲೆ ಸುದ್ದಿಗೋಷ್ಠಿಯಲ್ಲಿ ಅಪಚಿತನೊಬ್ಬ ಶೂ ಎಸೆದ ಘಟನೆ ವರದಿಯಾಗಿದೆ.
ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ನರಸಿಂಹ ರಾವ್ ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸುತ್ತಿದ್ದಾಗ ಅವರ ಮೇಲೆ ಅಪರಿಚಿತನೊಬ್ಬ ಶೂ ಎಸೆದ ಎಂದು ತಿಳಿದು ಬಂದಿದೆ. ಆದರೆ ಅವರ ಮೇಲೆ ಶೂ ಬೀಳಲಿಲ್ಲ . ಆರೋಪಿ ಶಕ್ತಿ ಭಾರ್ಗವ್ ಎಂಬಾತ ಶೂ ಎಸೆದಿದ್ದಾನೆ. ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ
Next Story