ವಾರಣಾಸಿಯಲ್ಲಿ ಮೋದಿ ವಿರುದ್ಧ 150 ಅರಿಶಿಣ ಬೆಳೆಗಾರರ ಸ್ಪರ್ಧೆ
ಹೈದರಾಬಾದ್, ಎ.23: ಲೋಕಸಭಾ ಚುನಾವಣೆಯಲ್ಲಿ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ 150 ಅರಿಶಿಣ ಬೆಳೆಗಾರರು ಸ್ಪರ್ಧಿಸಲಿದ್ದಾರೆ ಎಂದು timesofindia.com ವರದಿ ಮಾಡಿದೆ. ಇವರಲ್ಲಿ ತೆಲಂಗಾಣದ ನಿಝಾಮಾಬಾದ್ ನಿಂದ 50 ಮತ್ತು ತಮಿಳುನಾಡಿನಿಂದ 100 ರೈತರಿದ್ದಾರೆ.
‘ಕೇಂದ್ರವು ಅರಿಶಿಣ ಮಂಡಳಿ’ಯನ್ನು ಸ್ಥಾಪಿಸಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ” ಎಮದು ತೆಲಂಗಾಣ ಅರಿಶಿಣ ಬೆಳೆಗಾರರ ಅಸೋಸಿಯೇಶನ್ ಅಧ್ಯಕ್ಷ ತಿರುಪತಿ ರೆಡ್ಡಿ ಹೇಳಿದ್ದಾರೆ. ಎಪ್ರಿಲ್ 25ರಂದು ರೈತರು ವಾರಣಾಸಿಗೆ ತೆರಳಲಿದ್ದು, 29ರಂದು ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೆ ಅಂದು ಕೊನೆಯ ದಿನವಾಗಿದೆ.
ತೆಲಂಗಾಣದಲ್ಲಿ ಮೊದಲ ಹಂತದ ಚುನಾವಣೆ ನಡೆದಾಗ 180 ಅರಿಶಿಣ ಬೆಳೆಗಾರರು ಟಿಆರ್ ಎಸ್ ಅಭ್ಯರ್ಥಿ ಕವಿತಾ ಕಲ್ವಕುಂಟ್ಲಾ ವಿರುದ್ಧ ಸ್ಪರ್ಧಿಸಿದ್ದರು.
Next Story