ಸನ್ನಿ ಡಿಯೋಲ್ಗೆ ಬಿಜೆಪಿ ಟಿಕೆಟ್: ವಿನೋದ್ ಖನ್ನಾ ಪತ್ನಿ ಅಸಮಾಧಾನ
ಹೊಸದಿಲ್ಲಿ,ಎ.27: “ಪಂಜಾಬ್ನ ಗುರುದಾಸ್ಪುರ ಲೋಕಸಭಾ ಕ್ಷೇತ್ರದಿಂದ ಸನ್ನಿ ಡಿಯೋಲ್ಗೆ ಟಿಕೆಟ್ ನೀಡಿರುವುದರಿಂದ ಬಿಜೆಪಿ ನನ್ನನ್ನು ತ್ಯಜಿಸಿದ ಮತ್ತು ತಿರಸ್ಕರಿಸಿದ ಭಾವನೆ ಮೂಡಿದೆ” ಎಂದು ಮಾಜಿ ಕೇಂದ್ರ ಸಚಿವ , ನಟ ವಿನೋದ್ ಖನ್ನಾ ಅವರ ಪತ್ನಿ ಕವಿತಾ ಖನ್ನಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾನು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಖನ್ನಾ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಶನಿವಾರ ದಿಲ್ಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಖನ್ನಾ, ತನ್ನ ಪತಿ ವಿನೋದ್ ಖನ್ನಾ ನಾಲ್ಕು ಬಾರಿ ಗೆಲುವು ಸಾಧಿಸಿದ್ದ ಗುರುದಾಸ್ಪುರ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡದೆ ಬಿಜೆಪಿ ತನಗೆ ಮೋಸ ಮಾಡಿದೆ ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ.
“ನನ್ನನ್ನು ಸಂಪೂರ್ಣವಾಗಿ ಕಡೆಗಣಿಸಿದ ಭಾವನೆ ಉಂಟಾಗಿದೆ. ಪಕ್ಷದಿಂದ ಯಾವೊಬ್ಬನೂ ಗುರುದಾಸ್ಪುರದಿಂದ ಇನ್ನೊನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ನನಗೆ ತಿಳಿಸಲೇ ಇಲ್ಲ. ಸನ್ನಿ ಡಿಯೋಲ್ ಪಕ್ಷ ಸೇರಿದಾಗ ನಾನು ದಿಲ್ಲಿಯಲ್ಲಿದ್ದೆ. ಅವರು ಕರೆದಿದ್ದರೆ ನಾನೂ ಹೋಗುತ್ತಿದ್ದೆ. ನನಗೆ ಇತರ ಹಲವು ಪಕ್ಷಗಳಿಂದ ಕರೆ ಬರುತ್ತಿದೆ” ಎಂದು ಖನ್ನಾ ತಿಳಿಸಿದ್ದಾರೆ.