ಐದು ವರ್ಷದಲ್ಲಿ 9ನೇ ಹಲ್ಲೆ; ನನ್ನ ಹತ್ಯೆಗೆ ಸಂಚು: ಕೇಜ್ರಿವಾಲ್
ಹೊಸದಿಲ್ಲಿ, ಮೇ 5: ಶನಿವಾರ ದಿಲ್ಲಿಯಲ್ಲಿ ರೋಡ್ಶೋ ಸಂದರ್ಭ ನಡೆದಿರುವ ಹಲ್ಲೆಯೂ ಸೇರಿದಂತೆ ಕಳೆದ ಐದು ವರ್ಷದಲ್ಲಿ ತನ್ನ ಮೇಲೆ 9 ಬಾರಿ ಹಲ್ಲೆ ನಡೆಸಲಾಗಿದ್ದು ತನ್ನನ್ನು ಹತ್ಯೆಗೈಯಲು ಮಾಡಿರುವ ಸಂಚು ಇದಾಗಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾದ ಬಳಿಕದ ಐದು ವರ್ಷದಲ್ಲಿ ನಡೆದಿರುವ 9ನೇ ಹಲ್ಲೆ ಘಟನೆ ಇದಾಗಿದೆ. ದೇಶದ ಇತಿಹಾಸದಲ್ಲೇ ಯಾವುದೇ ಮುಖ್ಯಮಂತ್ರಿಯ ಮೇಲೆ ಇಷ್ಟೊಂದು ಹಲ್ಲೆ ನಡೆದಿರುವ ಉದಾಹರಣೆಯಿಲ್ಲ ಎಂದ ಅವರು, ಈ ದೇಶದಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಭದ್ರತಾ ವ್ಯವಸ್ಥೆಯನ್ನು ಆಯಾ ರಾಜ್ಯ ಸರಕಾರ ನಿರ್ವಹಿಸುತ್ತದೆ. ಆದರೆ ದಿಲ್ಲಿಯ ಮುಖ್ಯಮಂತ್ರಿಯ ಭದ್ರತಾ ವ್ಯವಸ್ಥೆ ಮಾತ್ರ ವಿಪಕ್ಷದ, ಅಂದರೆ ಬಿಜೆಪಿಯ ಕೈಯಲ್ಲಿದೆ ಎಂದು ದೂರಿದರು.
Next Story