ಬಾಪುವನ್ನು ಅವಮಾನಿಸಿದ ಪ್ರಜ್ಞಾರನ್ನು ಕ್ಷಮಿಸಲು ಸಾಧ್ಯವಿಲ್ಲ: ಪ್ರಧಾನಿ ಮೋದಿ
ಹೊಸದಿಲ್ಲಿ, ಮೇ 17: ನಾಥೂರಾಮ್ ಗೋಡ್ಸೆ ‘ದೇಶಭಕ್ತ’ ಎಂದು ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ, ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, “ಬಾಪುವನ್ನು ಅವಮಾನಿಸಿದ ಆಕೆಯನ್ನು ತಾನೆಂದಿಗೂ ಕ್ಷಮಿಸುವುದಿಲ್ಲ” ಎಂದು ಹೇಳಿದ್ದಾರೆ.
ಚಾನೆಲ್ ಒಂದರ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಪ್ರಜ್ಞಾ ಸಿಂಗ್ ಹೇಳಿಕೆಯನ್ನು ಕ್ಷಮಿಸಲು ಸಾಧ್ಯವಿಲ್ಲ. ಆಕೆ ಕ್ಷಮೆ ಯಾಚಿಸಿದ್ದಾರೆ. ಅದು ಬೇರೆ ವಿಚಾರ. ಆದರೆ ನನ್ನ ಹೃದಯದಲ್ಲಿ, ನಾನು ಆಕೆಯನ್ನು ಕ್ಷಮಿಸುವುದಿಲ್ಲ” ಎಂದರು.
“ಗಾಂಧಿ ಮತ್ತು ಗೋಡ್ಸೆ ಬಗ್ಗೆ ನೀಡಿರುವ ಎಲ್ಲಾ ಹೇಳಿಕೆಗಳೂ ತಪ್ಪು. ಇದನ್ನು ಟೀಕಿಸಲೇ ಬೇಕು” ಎಂದವರು ಹೇಳಿದರು.
Next Story