ಶುಕ್ರವಾರ ಕೇಂದ್ರ ಸಚಿವ ಸಂಪುಟ ಸಭೆ
ಹೊಸದಿಲ್ಲಿ, ಮೇ 23: ಕೇಂದ್ರ ಸಚಿವ ಸಂಪುಟ ಶುಕ್ರವಾರ ಸಭೆ ಸೇರಿ 16ನೇ ಲೋಕಸಭೆಯ ವಿಸರ್ಜನೆಗೆ ಶಿಫಾರಸು ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಸಚಿವ ಸಂಪುಟದ ಸಭೆಯ ಬಳಿಕ ಮಂತ್ರಿ ಮಂಡಳಿ(ಸಹಾಯಕ ಸಚಿವರೂ ಇದರಲ್ಲಿ ಒಳಗೊಂಡಿರುತ್ತಾರೆ)ಯ ಸಭೆ ಪ್ರಧಾನ ಮಂತ್ರಿಯವರ ಸೌತ್ಬ್ಲಾಕ್ ಕಚೇರಿಯಲ್ಲಿ ನಡೆಯಲಿದೆ.
ಸಂಪುಟದ ಶಿಫಾರಸನ್ನು ನಿರ್ಣಯದ ಮೂಲಕ ಅಂಗೀಕರಿಸಿದ ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಲಿ ಲೋಕಸಭೆಯನ್ನು ವಿಸರ್ಜಿಸಲಿದ್ದಾರೆ. ಈ ಲೋಕಸಭೆಯ ಅವಧಿ ಜೂನ್ 3ಕ್ಕೆ ಅಂತ್ಯಗೊಳ್ಳಲಿದೆ. ಜೂನ್ 3ರ ಮೊದಲು 17ನೇ ಲೋಕಸಭೆಯನ್ನು ರಚಿಸಬೇಕಿದ್ದು , ಮೂವರು ಸದಸ್ಯರ ಚುನಾವಣಾ ಆಯೋಗವು ಹೊಸ ಸದಸ್ಯರ ಪಟ್ಟಿಯನ್ನು ರಾಷ್ಟ್ರಪತಿಗೆ ಸಲ್ಲಿಸಿದ ಬಳಿಕ ನೂತನ ಲೋಕಸಭೆ ರಚನೆಯ ಪ್ರಕ್ರಿಯೆಗೆ ಚಾಲನೆ ದೊರಕಲಿದೆ.
Next Story