ಈ ಬಾರಿ ರಾಮಮಂದಿರ ನಿರ್ಮಿಸದಿದ್ದರೆ ಜನರು ಚಪ್ಪಲಿಯಲ್ಲಿ ಹೊಡೆಯುತ್ತಾರೆ: ಶಿವಸೇನೆ
ಹೊಸದಿಲ್ಲಿ, ಜೂ.6: ರಾಮ ಮಂದಿರ ನಿರ್ಮಾಣದ ಭರವಸೆಯನ್ನು ಈ ಬಾರಿ ಈಡೇರಿಸದಿದ್ದಲ್ಲಿ ಜನರು ತಮಗೆ ‘ಚಪ್ಪಲಿಯಲ್ಲಿ ಹೊಡೆಯುತ್ತಾರೆ’ ಎಂದು ಶಿವಸೇನೆ ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ.
“2014ರಲ್ಲಿ ರಾಮ ಮಂದಿರ ನಿರ್ಮಾಣದ ಭರವಸೆಯನ್ನು ನಾವು ನೀಡಿದ್ದೆವು. ಆದರೆ ಈಡೇರಿಸಲು ಸಾಧ್ಯವಾಗಲಿಲ್ಲ. ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಯನ್ನೂ ರಾಮನ ಹೆಸರಿನಲ್ಲೇ ಎದುರಿಸಿದ್ದೆವು. ಚುನಾವಣೆಗಿಂತ ಮೊದಲು ನಾವು ಅಯೋಧ್ಯೆಗೆ ತೆರಳಿದ್ದೆವು ಹಾಗು ರಾಮ ಮಂದಿರ ನಿರ್ಮಾಣಕ್ಕೆ ಬದ್ಧರಾಗಿದ್ದೇವೆ. ಈ ಬಾರಿ ರಾಮ ಮಂದಿರ ನಿರ್ಮಾಣ ಆರಂಭವಾಗುತ್ತದೆ ಎಂದು ನನಗನಿಸುತ್ತದೆ. ಆದರೆ ನಮಗೆ ಸಾಧ್ಯವಾಗದಿದ್ದರೆ ದೇಶವು ನಮ್ಮ ಮೇಲಿನ ನಂಬಿಕೆ ಕಳೆದುಕೊಳ್ಳುತ್ತದೆ. ಕೋಪದಿಂದ ಚಪ್ಪಲಿಯನ್ನು ಕೈಗೊತ್ತಿಕೊಳ್ಳಬಹುದು” ಎಂದವರು ಹೇಳಿದರು.
Next Story