ತ್ರಿವಳಿ ತಲಾಕ್ ಗೆ ಕೇಂದ್ರ ಸಂಪುಟ ಅನುಮೋದನೆ
ಹೊಸದಿಲ್ಲಿ, ಜೂ. 12: ನೂತನ ತ್ರಿವಳಿ ತಲಾಕ್ ಮಸೂದೆಗೆ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿತು ಎಂದು ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ಜೂನ್ 17ರಂದು ಆರಂಭವಾಗಲಿರುವ 17ನೇ ಲೋಕಸಭೆಯ ಮೊದಲ ಅಧಿವೇಶನದಲ್ಲಿ ಈ ಮಸೂದೆ ಮಂಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
ತ್ರಿವಳಿ ತಲಾಕ್ ನಿಷೇಧ ಮಸೂದೆ ಈ ಹಿಂದಿನ ಲೋಕಸಭೆಯಲ್ಲಿ ಮಂಜೂರಾಗಿತ್ತು. ಆದರೆ, ರಾಜ್ಯ ಸಭೆಯಲ್ಲಿ ಬಾಕಿ ಉಳಿದಿತ್ತು. 16ನೇ ಲೋಕಸಭೆಯ ವಿಸರ್ಜನೆಯೊಂದಿಗೆ ಮಸೂದೆ ರದ್ದಾಗಿದೆ. ಅದನ್ನು ಮರು ಮಂಡಿಸುವ ಅಗತ್ಯ ಇದೆ. ಮುಸ್ಲಿಮ್ ಮಹಿಳೆಯರ ತ್ರಿವಳಿ ತಲಾಕ್ ನಿಷೇಧಿಸುವ ಹಾಗೂ ಅದನ್ನು ಅಪರಾಧದ ಅಡಿಯಲ್ಲಿ ಪರಿಗಣಿಸುವ ಆಧ್ಯಾದೇಶವನ್ನು ಕೇಂದ್ರ ಸರಕಾರ ಕಳೆದ ಫೆಬ್ರವರಿಯಲ್ಲಿ ಘೋಷಿಸಿತ್ತು.
Next Story