ಉತ್ತರಪ್ರದೇಶದಲ್ಲಿ ‘ಜಂಗಲ್ರಾಜ್’ ಆಡಳಿತ: ಕಾಂಗ್ರೆಸ್ ಕಿಡಿ
ಹೊಸದಿಲ್ಲಿ, ಜೂ.13: ಉತ್ತರಪ್ರದೇಶದ ಕಾನೂನು ಹಾಗೂ ಸುವ್ಯವಸ್ಥೆಗೂ, ಜಂಗಲ್ ರಾಜ್ಯ ಆಡಳಿತಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಉತ್ತರಪ್ರದೇಶದ ಬಾರ್ ಕೌನ್ಸಿಲ್ ಮುಖ್ಯಸ್ಥೆ ದರ್ವೇಶ್ ಯಾದವ್ ರನ್ನು ಆಗ್ರಾದ ನ್ಯಾಯಾಲಯದ ಆವರಣದೊಳಗೆ ಬುಧವಾರ ಗುಂಡಿಟ್ಟು ಹತ್ಯೆಗೈದ ಘಟನೆಯನ್ನು ಉಲ್ಲೇಖಿಸಿದ ಕಾಂಗ್ರೆಸ್, ಬಿಜೆಪಿ ಆಡಳಿತದಲ್ಲಿ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದೆ.
‘‘ಅಜಯ್ ಸಿಂಗ್ ಬಿಶ್ತ್(ಮುಖ್ಯಮಂತ್ರಿ ಆದಿತ್ಯನಾಥ್)ಮೂಗಿನ ಅಡಿಯಲ್ಲಿರುವ ಉತ್ತರಪ್ರದೇಶ ಸರಕಾರದಲ್ಲಿ ಬಾರ್ ಕೌನ್ಸಿಲ್ನ ಮೊದಲ ಮಹಿಳಾ ಅಧ್ಯಕ್ಷೆಯೊಬ್ಬರು ಗುಂಡೇಟಿಗೆ ಬಲಿಯಾಗಿದ್ದಾರೆ. ಬಿಜೆಪಿ ಆಡಳಿತದ ಉ.ಪ್ರದೇಶದ ಕಾನೂನು ಹಾಗೂ ಸುವ್ಯವಸ್ಥೆಗೂ, ಜಂಗಲ್ ರಾಜ್ಯಕ್ಕೂ ಹೆಚ್ಚು ವ್ಯತ್ಯಾಸ ಕಾಣುತ್ತಿಲ್ಲ’’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ.
Next Story