ರಾಜ್ಯಸಭೆಯಲ್ಲಿ ತ್ರಿವಳಿ ತಲಾಕ್ ವಿಚಾರದಲ್ಲಿ ಎನ್ ಡಿಎ ಸರಕಾರಕ್ಕೆ ನಮ್ಮ ಬೆಂಬಲವಿಲ್ಲ: ಜೆಡಿಯು
ಹೊಸದಿಲ್ಲಿ, ಜೂ.13: ರಾಜ್ಯಸಭೆಯಲ್ಲಿ ತ್ರಿವಳಿ ತಲಾಕ್ ವಿಚಾರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರಕ್ಕೆ ಬೆಂಬಲವಿಲ್ಲ ಎಂದು ಬಿಜೆಪಿಯ ಮಿತ್ರ ಪಕ್ಷದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಹೇಳಿದೆ.
“”ಜೆಡಿಯು ಈಗಾಗಲೇ ತ್ರಿವಳಿ ತಲಾಕ್ ಮಸೂದೆಯನ್ನು ವಿರೋಧಿಸಿದೆ ಮತ್ತು ವಿರೋಧಿಸುವುದನ್ನು ಮುಂದುವರಿಸಲಿದೆ” ಎಂದು ಪಕ್ಷದ ಹಿರಿಯ ನಾಯಕ ಹಾಗು ಬಿಹಾರ ಸಚಿವ ಶಯಾಮ್ ರಝಾಕ್ ಹೇಳಿದ್ದಾರೆ.
ತ್ರಿವಳಿ ತಲಾಕ್ ಎನ್ನುವುದು ಸಾಮಾಜಿಕ ವಿಷಯವಾಗಿದ್ದು, ಸಮಾಜವೇ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ರಾಜ್ಯಸಭೆಯಲ್ಲಿ ಈ ಹಿಂದೆಯೂ ಜೆಡಿಯು ತ್ರಿವಳಿ ತಲಾಕ್ ವಿರುದ್ಧ ಮತ ಚಲಾಯಿಸಿತ್ತು ಎಂದವರು ಹೇಳಿದರು.
ಈ ಹಿಂದೆ ಸ್ವತಃ ನಿತೀಶ್ ಕುಮಾರ್ ತ್ರಿವಳಿ ತಲಾಕ್ ಮಸೂದೆಯನ್ನು ವಿರೋಧಿಸಿದ್ದರು.
Next Story