ಬಂಟ್ವಾಳದ ರೈತನನ್ನು ಪ್ರಶಂಸಿಸಿದ ‘ಮಹೀಂದ್ರಾ’ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ
ಹೊಸದಿಲ್ಲಿ, ಜೂ.20: ಅಡಿಕೆ ಮರ ಏರುವ ಮೋಟಾರ್ ಬೈಕ್ ಕಂಡುಹಿಡಿದ ಬಂಟ್ವಾಳದ ರೈತ ಗಣಪತಿ ಭಟ್ ಬಗ್ಗೆ ಮಹೀಂದ್ರಾ ಗ್ರೂಪ್ ಚೇರ್ ಮ್ಯಾನ್ ಆನಂದ್ ಮಹೀಂದ್ರಾ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ, “ಇದು ಪರಿಣಾಮಕಾರಿ ಮಾತ್ರವಲ್ಲ, ಕಡಿಮೆ ತೂಕದಲ್ಲಿ ಸೊಗಸಾಗಿ ವಿನ್ಯಾಸಗೊಳಿಸಲಾಗಿದೆ” ಎಂದಿದ್ದು, ಮಹೀಂದ್ರಾ & ಮಹೀಂದ್ರಾದ ಕೃಷಿ ಸಲಕರಣೆ ಘಟಕದ ಮುಖ್ಯಸ್ಥರನ್ನು ಟ್ಯಾಗ್ ಮಾಡಿ, “ನಾವು ಮಿ. ಭಟ್ ಅವರ ಆವಿಷ್ಕಾರವನ್ನು ಮಾರ್ಕೆಟ್ ಮಾಡಬಹುದೇ ಎಂದು ಪರಿಶೀಲಿಸಿ” ಎಂದಿದ್ದಾರೆ.
ಪಣೋಲಿಬೈಲ್ ಸಮೀಪದ ಕೋಮಾಲಿಯ ಪ್ರಗತಿಪರ ಕೃಷಿಕ ಗಣಪತಿ ಭಟ್ ಈ ಯಂತ್ರವನ್ನು ಕಂಡುಹಿಡಿದಿದ್ದರು. ಸುಲಭವಾಗಿ ಅಡಿಕೆ ಮರ ಏರುವ ಈ ಯಂತ್ರ ಕೃಷಿಕರಿಗೆ ಅತ್ಯಂತ ಸಹಕಾರಿಯಾಗಲಿದೆ. ಈ ಬಗ್ಗೆ ವಾರ್ತಾಭಾರತಿ ವಿಶೇಷ ವರದಿ ಪ್ರಕಟಿಸಿತ್ತು.
How cool is this? The device not only seems effective & does the job, but also looks elegantly designed with a minimum of weight. @rajesh664 can your team look at this more closely & see whether we can market Mr. Bhat’s device as part of our Farm solutions portfolio? https://t.co/4O0y2DmBzh
— anand mahindra (@anandmahindra) June 18, 2019