‘ಜೈ ಶ್ರೀರಾಮ್’, ‘ಜೈ ಹನುಮಾನ್’ ಘೋಷಣೆ ಕೂಗಲು ಬಲವಂತಪಡಿಸಿ ಮುಸ್ಲಿಂ ಯುವಕನನ್ನು ಥಳಿಸಿ ಕೊಂದರು
ದುಷ್ಕರ್ಮಿಗಳಿಂದ ಮತ್ತೊಂದು ಗುಂಪು ಹತ್ಯೆ
ಜಾರ್ಖಂಡ್, ಜೂ.23: ದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಹಿಂಸೆಗಳು ಹೆಚ್ಚುತ್ತಿರುವ ನಡುವೆಯೇ ಜಾರ್ಖಂಡ್ ನಲ್ಲಿ ಯುವಕನೊಬ್ಬನನ್ನು ಗುಂಪೊಂದು ‘ಜೈ ಶ್ರೀರಾಮ್’, ‘ಜೈ ಹನುಮಾನ್’ ಘೋಷಣೆ ಕೂಗುವಂತೆ ಬಲವಂತಪಡಿಸಿ ಥಳಿಸಿ ಕೊಂದಿರುವ ಘಟನೆ ನಡೆದಿದೆ.
ಜಾರ್ಖಂಡ್ ನ ಖರ್ಸವಾನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮೃತಪಟ್ಟ ಯುವಕನನ್ನು ತಬ್ರೇಝ್ ಅನ್ಸಾರಿ ಎಂದು ಗುರುತಿಸಲಾಗಿದೆ. ಜೂನ್ 18ರಂದು ಗುಂಪು ತಬ್ರೇಝ್ ರಿಗೆ ಥಳಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಅವರು ಜೂನ್ 22ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ರಾಕ್ಷಸೀಯ ಕೃತ್ಯದ ವಿಡಿಯೋಗಳು ವೈರಲ್ ಆಗಿವೆ. ದುಷ್ಕರ್ಮಿಗಳು ತಬ್ರೇಝ್ ರಿಗೆ ಥಳಿಸುತ್ತಾ ‘ಜೈ ಶ್ರೀರಾಮ್’, ಜೈ ಹನುಮಾನ್ ಎಂದು ಘೋಷಣೆ ಕೂಗಲು ಬಲವಂತಪಡಿಸುತ್ತಿರುವುದು ವಿಡಿಯೋದಲ್ಲಿದೆ.ಜೂನ್ 18ರಂದು ದುಷ್ಕರ್ಮಿಗಳು ತಬ್ರೇಝ್ ರಿಗೆ ಥಳಿಸಿದ ನಂತರ ಕಳ್ಳ ಎಂದು ಆರೋಪಿಸಿ ಪೊಲೀಸ್ ವಶಕ್ಕೆ ನೀಡಿದ್ದರು. ನಂತರ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಜೂನ್ 22ರಂದು ತಬ್ರೇಝ್ ಆರೋಗ್ಯದಲ್ಲಿ ಏರುಪೇರಾದಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆಗೆ ಸಂಬಂಧಿಸಿ ಒಬ್ಬ ಆರೋಪಿ ಪಪ್ಪು ಮಂಡಲ್ ನನ್ನ ಬಂಧಿಸಲಾಗಿದೆ.
One more Mob Lynching, Jharkhand.
— Md Asif Khan آصِف (@imMAK02) June 23, 2019
Tabrez Ansari aka Sonu was brutally thrashed by Mob in suspicion of theft.
When he told his name to Mob, then Mob beaten him up brutally, Yesterday he died in Hospital.
Welcome to Modi's Hindu Rashtra 2.0
Part 1
1/n pic.twitter.com/Arw4rkBCnq