‘ಜೈಶ್ರೀ ರಾಂ’ ಎಂದು ಹೇಳಿಸಿ ಯುವಕನ ಥಳಿಸಿ ಹತ್ಯೆ: ‘ಕಟ್ ಆ್ಯಂಡ್ ಪೇಸ್ಟ್’ ಆರೋಪಗಳು ಎಂದ ಜಾರ್ಖಂಡ್ ಸಚಿವ
ಹೊಸದಿಲ್ಲಿ, ಜೂ.24: ಮೋಟಾರ್ ಸೈಕಲ್ ಕದ್ದ ಆರೋಪದ ಮೇಲೆ ಗುಂಪೊಂದು 24 ವರ್ಷದ ಯುವಕನನ್ನು ಸೆರೈಕಲ-ಖರ್ಸವಾನ್ ಜಿಲ್ಲೆಯಲ್ಲಿ ಥಳಿಸಿ ಹತ್ಯೆಗೈದ ಘಟನೆಯಂತಹ ಪ್ರಕರಣಗಳನ್ನು ರಾಜಕೀಯಗೊಳಿಸುವುದು ತಪ್ಪು ಎಂದು ಜಾರ್ಖಂಡ್ ಸಚಿವ ಸಿ ಪಿ ಸಿಂಗ್ ಹೇಳಿದ್ದಾರೆ.
``ಇಂತಹ ಪ್ರಕರಣಗಳನ್ನು ಬಿಜೆಪಿ, ಆರೆಸ್ಸೆಸ್, ವಿಹಿಂಪ ಹಾಗೂ ಬಜರಂಗದಳದೊಂದಿಗೆ ಥಳುಕು ಹಾಕುವುದು ಈ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಇದು `ಕಟ್ ಆ್ಯಂಡ್ ಪೇಸ್ಟ್ ಸಮಯ' ಯಾವ ಪದಗಳು ಯಾರಿಗೆ ಯಾವಾಗ ಸೂಕ್ತವಾಗುತ್ತದೆ ಎಂದು ಹೇಳುವುದು ಕಷ್ಟ'' ಎಂದವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
``ಇಂತಹ ಘಟನೆಗಳಿಗೆ ರಾಜಕೀಯ ಬಣ್ಣ ನೀಡುವುದು ತಪ್ಪು, ಸರಕಾರ ತನಿಖೆ ನಡೆಸುತ್ತಿದೆ'' ಎಂದು ಅವರು ಹೇಳಿದರು. ತಬ್ರೇಝ್ ಅನ್ಸಾರಿ ಎಂಬವರಿಗೆ ಜೈ ಹನುಮಾನ್, ಜೈ ಶ್ರೀ ರಾಂ ಎಂಬ ಘೋಷಣೆಗಳನ್ನು ಕೂಗಲು ಹೇಳಿ ದಾಳಿಕೋರರು ಕಂಬಕ್ಕೆ ಕಟ್ಟಿ 12 ಗಂಟೆಗಳ ಕಾಲ ಥಳಿಸಿದ್ದರು. ನಂತರ ಅವರು ಮೃತಪಟ್ಟಿದ್ದರು.
Next Story