ಪುತ್ರನ ಮೇಲಿನ ಅತ್ಯಾಚಾರ ಆರೋಪ ಇತ್ಯರ್ಥಗೊಳಿಸಲು ಯಾರೂ ಪ್ರಯತ್ನಿಸಿಲ್ಲ: ಕೊಡಿಯೇರಿ ಬಾಲಕೃಷ್ಣನ್
ಬಿನೋಯ್
ತಿರುವನಂತಪುರ, ಜೂ. 25: ತನ್ನ ಪುತ್ರ ಬಿನೋಯ್ ಕೊಡಿಯೇರಿ ವಿರುದ್ಧ ಮುಂಬೈ ಮೂಲದ ಮಹಿಳೆ ಮಾಡಿರುವ ಅತ್ಯಾಚಾರದ ಆರೋಪವನ್ನು ಇತ್ಯರ್ಥ ಮಾಡಲು ಯಾರೊಬ್ಬರೂ ಪ್ರಯತ್ನಿಸಲಿಲ್ಲ ಎಂದು ಸಿಪಿಎಂನ ರಾಜ್ಯ ಕಾರ್ಯದರ್ಶಿ ಕೋಡಿಯೇರಿ ಬಾಲಕೃಷ್ಣನ್ ಸೋಮವಾರ ಹೇಳಿದ್ದಾರೆ.
ಪಕ್ಷದ ರಾಜ್ಯ ಸಮಿತಿಯೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಬಾಲಕೃಷ್ಣನ್, “ನ್ಯಾಯಾಲಯ ನನ್ನ ಮನೆಗೆ ಜನವರಿಯಲ್ಲಿ ನೋಟಿಸು ಕಳಹಿಸಿದ ಬಳಿಕವೇ ನನಗೆ ಮಹಿಳೆಯ ದೂರಿನ ಬಗ್ಗೆ ತಿಳಿಯಿತು” ಎಂದಿದ್ದಾರೆ. “ಈ ಪ್ರಕರಣದಲ್ಲಿ ನಾನಾಗಲಿ, ನನ್ನ ಪಕ್ಷವಾಗಲಿ ಹಸ್ತಕ್ಷೇಪ ನಡೆಸುವುದಿಲ್ಲ. ಯಾರೊಬ್ಬರೂ ಈ ಪ್ರಕರಣವನ್ನು ಇತ್ಯರ್ಥ ಮಾಡಲು ಯತ್ನಿಸಲಿಲ್ಲ” ಎಂದು ಬಾಲಕೃಷ್ಣನ್ ಕೋಡಿಯೇರಿ ಹೇಳಿದ್ದಾರೆ. ವಿವಾಹವಾಗುವುದಾಗಿ ನಂಬಿಸಿ ಬಿನೋಯ್ ಅತ್ಯಾಚಾರ ಎಸಗಿದ್ದಾರೆ. ನಮ್ಮಿಬ್ಬರ ಸಂಬಂಧದಲ್ಲಿ 8 ವರ್ಷದ ಪುತ್ರನಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಮಹಿಳೆಯ ಆರೋಪ ನಿರಾಕರಿಸಿರುವ ಬಿನೋಯ್ ನಿರೀಕ್ಷಣಾ ಜಾಮೀನಿಗಾಗಿ ಮುಂಬೈ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಾರೆ. ಮಹಿಳೆ ಒದಗಿಸಿದ ದಾಖಲೆಗಳು ನಕಲಿ ಎಂದು ಬಿನೋಯ್ ಹೇಳಿದ್ದಾರೆ.