ಸುಪ್ರೀಂ ಕೋರ್ಟ್ ನಲ್ಲಿ ಅತೃಪ್ತ ಶಾಸಕರ ಅರ್ಜಿಯ ವಿಚಾರಣೆ ಸ್ವಲ್ಪ ಹೊತ್ತು ಮುಂದೂಡಿಕೆ
ಹೊಸದಿಲ್ಲಿ, ಜು.12: ಅತೃಪ್ತ ಶಾಸಕರು ರಾಜೀನಾಮೆ ವಿಳಂಬ ವಿಚಾರದಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ ಸುಪ್ರೀಂ ಕೋರ್ಟ್ ಸ್ವಲ್ಪ ಹೊತ್ತು ಮುಂದೂಡಿದೆ.
ಸ್ಪೀಕರ್ ಪರ ವಕೀಲರು ಆಗಮಿಸದ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ಸ್ವಲ್ಪ ಹೊತ್ತು ಮುಂದೂಡಿದೆ. ನೋಟಿಸ್ ಗೆ ಸ್ಪೀಕರ್ ಪರ ವಕೀಲರು ಉತ್ತರ ಸಲ್ಲಿಸಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಪರ ವಾದ ಮಾಡಬೇಕಿರುವ ಅಭಿಷೇಕ್ ಮನು ಸಿಂಘ್ಬಿ ಇನ್ನೂ ನ್ಯಾಯಾಲಯಕ್ಕೆ ಆಗಮಿಸಿಲ್ಲ
Next Story