ಗೋಶಾಲೆಯಲ್ಲಿ 35 ಗೋವುಗಳು ಸಾವು: ಸ್ಥಳೀಯರ ಪ್ರತಿಭಟನೆ
ಸಾಂದರ್ಭಿಕ ಚಿತ್ರ
ಪ್ರಯಾಗ್ರಾಜ್, ಜು. 12: ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿರುವ ತಾತ್ಕಾಲಿಕ ಗೋಶಾಲೆಯಲ್ಲಿ ಶುಕ್ರವಾರ 35 ಕಳೇಬರಗಳು ಪತ್ತೆಯಾಗಿವೆ. ಮಿಂಚಿನ ಆಘಾತಕ್ಕೆ ಈ ಜಾನುವಾರುಗಳು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
‘‘ಮಿಂಚಿನ ಆಘಾತಕ್ಕೆ 35 ಜಾನುವಾರುಗಳು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ’’ ಎಂದು ಜಿಲ್ಲಾ ದಂಡಾಧಿಕಾರಿ ಭಾನು ಚಂದ್ರ ಗೋಸ್ವಾಮಿ ತಿಳಿಸಿದ್ದಾರೆ. ಸ್ವಾವಲಂಬಿ ಗೋಶಾಲೆ ಹಾಗೂ ಗೋವುಗಳ ರಕ್ಷಣೆಗೆ ಸೌಲಭ್ಯ ಪೂರೈಸಲು ಗೋಶಾಲೆಗಳನ್ನು ನಿರ್ಮಿಸುವಂತೆ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ದಿನದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ಕನೌಜ್ ಜಿಲ್ಲೆಯ ಜಲದಾಬಾದ್ನಲ್ಲಿರುವ ಗೋಶಾಲೆಯಲ್ಲಿ ಕಳೆದ ವಾರ 12ಕ್ಕೂ ಅಧಿಕ ಗೋವುಗಳು ಹಸಿವಿನಿಂದ ಮೃತಪಟ್ಟಿದ್ದವು. ಗೋವುಗಳ ಸಾವಿನ ಹಿನ್ನೆಲೆಯಲ್ಲಿ ಗೋಶಾಲೆಯ ಹೊರಗೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು.
Next Story