ಉತ್ತರ ಪ್ರದೇಶದ ರಾಜ್ಯಪಾಲರಾಗಿ ಆನಂದಿಬೆನ್ ಪಟೇಲ್ ನೇಮಕ
ಹೊಸದಿಲ್ಲಿ, ಜು.20: ಮಧ್ಯಪ್ರದೇಶದ ರಾಜ್ಯಪಾಲರಾಗಿದ್ದ ಗುಜರಾತ್ ನ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ರನ್ನು ಉತ್ತರ ಪ್ರದೇಶದ ರಾಜ್ಯಪಾಲರಾಗಿ ವರ್ಗಾಯಿಸಲಾಗಿದೆ.
ಹಲವು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ ಮಾಡಲಾಗಿದ್ದು, ಸುಪ್ರಿಂ ಕೋರ್ಟ್ ನ ಹಿರಿಯ ವಕೀಲ ಜಗದೀಪ್ ಧನಕ್ಕರ್ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಬಿಜೆಪಿ ಎಂಎಲ್ ಎ ಫಾಗು ಚೌಹಾಣ್ – ಬಿಹಾರ, ಬಿಜೆಪಿ ಧುರೀಣ ರಮೇಶ್ ಬಯಾಸ್ - ತ್ರಿಪುರಾ, ಲಾಲಾ ಜಿ ಟಂಡನ್ –ಬಿಹಾರ ಮತ್ತು ನಾಗಲ್ಯಾಂಡ್ ರಾಜ್ಯಪಾಲರಾಗಿ ಆರ್. ಎನ್.ರವಿ ನೇಮಕಗೊಂಡಿದ್ದಾರೆ.
Next Story