ಕಲ್ಲಿದ್ದಲು ಗಣಿಯಲ್ಲಿ ಭೂ ಕುಸಿತ: ನಾಲ್ವರು ಕಾರ್ಮಿಕರು ಮೃತಪಟ್ಟಿರುವ ಶಂಕೆ
9 ಮಂದಿಗೆ ಗಾಯ
ಭುವನೇಶ್ವರ, ಜು.24: ಒಡಿಶಾದ ಕೋಲ್ ಇಂಡಿಯಾ ಲಿಮಿಟೆಡ್ ಗಣಿಯಲ್ಲಿ ಸಂಭವಿಸಿದ ಭೂಕುಸಿತ ಘಟನೆಯಲ್ಲಿ ನಾಲ್ವರು ಕಾರ್ಮಿಕರು ಮೃತಪಟ್ಟಿರುವ ಶಂಕೆ ಇದ್ದು, ಇತರ 9 ಮಂದಿ ಗಾಯಗೊಂಡಿರುವ ಸಾಧ್ಯತೆಯಿದೆ ಎಂದು ಕಂಪನಿಯ ವಕ್ತಾರರು ಬುಧವಾರ ತಿಳಿಸಿದ್ದಾರೆ.
ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಭಾರತ ಅತ್ಯಂತ ಅಪಾಯಕಾರಿ ದೇಶವಾಗಿದ್ದು, ಸರಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಹಾಗೂ ಸಿಂಗ್ರೆನಿ ಕೊಲ್ಲಿರೀಸ್ ಕಂ.ಲಿ.ನ ಗಣಿಯಲ್ಲಿ 2018ರಲ್ಲಿ ಏಳು ದಿನಗಳಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿದ್ದಾರೆ ಎಂದು ಸರಕಾರದ ಅಂಕಿ-ಅಂಶದಿಂದ ತಿಳಿದುಬಂದಿದೆ.
ದಿನಕ್ಕೆ 20,000 ಟನ್ ಉತ್ಪಾದನೆಯ ಸಾಮರ್ಥ್ಯವಿರುವ ಒಡಿಶಾದ ಗಣಿಯಲ್ಲಿ ಮಂಗಳವಾರ ರಾತ್ರಿ ನಡೆದ ಘಟನೆಯ ಬಳಿಕ ಮುಚ್ಚಲಾಗಿದೆ. ಕನಿಷ್ಠ ಒಂದು ವಾರದ ಬಳಿಕ ಗಣಿಗಾರಿಕೆ ಆರಂಭವಾಗಲಿದೆ ಎಂದು ಮಹಾನದಿ ಕೋಲ್ಫೀಲ್ಡ್ಸ್ ಲಿಮಿಟೆಡ್ ವಕ್ತಾರ ಡಿಕ್ಕೆನ್ ಮೆಹ್ರಾ ಹೇಳಿದ್ದಾರೆ.
Next Story