ಸಂಜೀವ್ ಭಟ್ ಭೇಟಿಗೆ ತೆರಳಿದ್ದ ಹಾರ್ದಿಕ್ ಪಟೇಲ್ ಪೊಲೀಸ್ ವಶಕ್ಕೆ
ಗಾಂಧೀನಗರ, ಆ.14: ವಜಾಗೊಂಡಿರುವ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ರನ್ನು ಭೇಟಿಯಾಗಲು ತೆರಳುತ್ತಿದ್ದ ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ ಹಾಗೂ ಇಬ್ಬರು ಕಾಂಗ್ರೆಸ್ ಶಾಸಕರನ್ನು ಬುಧವಾರ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ. ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಭಟ್ ಈಗ ಪಾಲನ್ಪುರ ಜಿಲ್ಲಾ ಕಾರಾಗೃಹದಲ್ಲಿದ್ದಾರೆ. ಪಾಲನ್ಪುರದ ಜೈಲಿನತ್ತ ತೆರಳುತ್ತಿದ್ದ ಹಾರ್ದಿಕ್ ಪಟೇಲ್, ಇಬ್ಬರು ಶಾಸಕರು ಹಾಗೂ ಇತರ 30 ಮಂದಿಯನ್ನು ಕಾನೂನು ಸುವ್ಯವಸ್ಥೆ ಪಾಲನೆಯ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ನೀರಜ್ ಬದ್ಗುಜಾರ್ ಹೇಳಿದ್ದಾರೆ. 1989-90ರಲ್ಲಿ ನಡೆದಿದ್ದ ಕಸ್ಟಡಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಆಗ ಪೊಲೀಸ್ ಅಧಿಕಾರಿಯಾಗಿದ್ದ ಸಂಜೀವ್ ಭಟ್ ಗೆ ಕಳೆದ ಜೂನ್ನಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
Next Story