ಭಾಗವತ್ ಹೇಳಿಕೆಯನ್ನು ಅನಗತ್ಯವಾಗಿ ವಿವಾದ ಮಾಡಲಾಗಿದೆ: ಆರ್ಸ್ಸೆಸ್
ನಾಗ್ಪಪುರ, ಆ.19: ಮೋಹನ್ ಭಾಗವತ್ ಅವರು ಮೀಸಲಾತಿ ಕುರಿತು ನೀಡಿರುವ ಹೇಳಿಕೆಯನ್ನು ಅನಗತ್ಯವಾಗಿ ವಿವಾದ ಮಾಡಲಾಗಿದೆ ಎಂದು ದೂರಿರುವ ಆರ್ಸ್ಸೆಸ್, ಯಾವುದೇ ವಿಷಯದಲ್ಲಿ ಚರ್ಚೆಯು ಸೌಹಾರ್ದಯುತ ವಾತಾವರಣದಲ್ಲಿ ನಡೆಯಬೇಕು ಎಂಬುದಷ್ಟೇ ಅವರ ವಾದವಾಗಿದೆ ಎಂದು ತಿಳಿಸಿದೆ.
ದಲಿತರು, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಹಾಗೂ ಆರ್ಥಿಕ ನೆಲೆಯಲ್ಲಿ ಇತರರಿಗೆ ನೀಡಲಾಗುತ್ತಿರುವ ಮೀಸಲಾತಿಯನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಸಂಘಪರಿವಾರ ಪದೇಪದೆ ಹೇಳುತ್ತಲೇ ಬಂದಿದೆ ಎಂದು ಆರ್ಸ್ಸೆಸ್ ಪ್ರಚಾರಕ್ ಅರುಣ್ ಕುಮಾರ್ ಟ್ವೀಟ್ ಮಾಡಿದ್ದಾರೆ.
Next Story