ಬ್ಯಾಂಕ್ ಗಳ ವಿಲೀನದಿಂದ ಉದ್ಯೋಗ ನಷ್ಟ ಭೀತಿಯ ಬಗ್ಗೆ ನಿರ್ಮಲಾ ಸೀತಾರಾಮನ್ ಹೇಳಿದ್ದು ಹೀಗೆ…
ಚೆನ್ನೈ, ಸೆ.1: ಬ್ಯಾಂಕ್ ಗಳ ವಿಲೀನದಿಂದ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದ ಬ್ಯಾಂಕ್ ನೌಕರರು ಹೆದರಬೇಕಿಲ್ಲ. ವಿಲೀನ ಪ್ರಕ್ರಿಯೆಯಿಂದ ಒಂದೇ ಒಂದು ಉದ್ಯೋಗ ನಷ್ಟವಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
“ಯಾವುದೇ ಉದ್ಯೋಗಿಯನ್ನು ತೆಗೆದುಹಾಕುವುದಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳಿದ್ದೇನೆ” ಎಂದವರು ಹೇಳಿದರು.
ಶುಕ್ರವಾರ ಸಾರ್ವಜನಿಕ ರಂಗದ 10 ಬ್ಯಾಂಕ್ಗಳ ಮಹಾವಿಲೀನವನ್ನು ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಈ ವಿಲೀನದ ನಂತರ 12 ಬ್ಯಾಂಕ್ ಗಳು ಮಾತ್ರವೇ ಕಾರ್ಯಾಚರಿಸಲಿವೆ.
Next Story