ಸಿಖ್ ವಿರೋಧಿ ಗಲಭೆಯ ಮರುತನಿಖೆಗೆ ಗೃಹ ಸಚಿವಾಲಯ ಗ್ರೀನ್ ಸಿಗ್ನಲ್: ಕಾಂಗ್ರೆಸ್ ನಾಯಕ ಕಮಲ್ ನಾಥ್ ಗೆ ಸಂಕಷ್ಟ
ಹೊಸದಿಲ್ಲಿ, ಸೆ.9: 1984ರ ಸಿಖ್ ವಿರೋಧಿ ಗಲಭೆಯ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರ ಹೆಸರಿರುವ ಪ್ರಕರಣವೊಂದನ್ನು ಶೀಘ್ರ ಮರುತನಿಖೆ ನಡೆಸಲು ಅಮಿತ್ ಶಾ ನೇತೃತ್ವದ ಗೃಹ ಸಚಿವಾಲಯ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ಕಾಂಗ್ರೆಸ್ ನ ಮತ್ತೊಬ್ಬ ನಾಯಕನಿಗೆ ಸಂಕಷ್ಟ ಎದುರಾಗಿದೆ.
ಆಗಸ್ಟಾ ವೆಸ್ಟ್ ಲ್ಯಾಂಡ್ ಪ್ರಕರಣದಲ್ಲಿ ಕಮಲ್ ನಾಥ್ ಸಂಬಂಧಿ ರಾತುಲ್ ಪುರಿ ಬಂಧನದ ಕೆಲ ದಿನಗಳ ನಂತರ ಸಚಿವಾಲಯ ಈ ನಿರ್ಧಾರಕ್ಕೆ ಮುಂದಾಗಿದೆ. ಕಳೆದ ತಿಂಗಳು ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ಸಿಬಿಐ ಬಂಧಿಸಿತ್ತು.
ಸಿಖ್ ವಿರೋಧಿ ಗಲಭೆಯಲ್ಲಿ ತನ್ನ ಪಾತ್ರ ಇಲ್ಲ ಎಂದು ಕಮಲ್ ನಾಥ್ ಹೇಳುತ್ತಲೇ ಬಂದಿದ್ದಾರೆ.
Next Story