ಕಾಂಗ್ರೆಸ್ ನಂಬಿಕಸ್ಥಪಕ್ಷವಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ: ಮಾಯಾವತಿ
ಲಕ್ನೋ,ಸೆ.17: ತನ್ನ ಆರು ಶಾಸಕರು ಸೋಮವಾರ ಕಾಂಗ್ರೆಸ್ ಸೇರಿರುವುದರಿಂದ ಆಕ್ರೋಶಗೊಂಡಿರುವ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಕಾಂಗ್ರೆಸ್ ಪಕ್ಷ ನಂಬಿಕೆಗೆ ಯೋಗ್ಯವಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ತಿಳಿಸಿದ್ದಾರೆ. ರಾಜಸ್ಥಾನದಲ್ಲಿ ಎರಡು ವಿಧಾನಸಭಾ ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆ ಮತ್ತು ಪೌರಸಂಸ್ಥೆಗಳ ಚುನಾವಣೆಗೂ ಮೊದಲು ನಡೆದಿರುವ ಈ ಬೆಳವಣಿಗೆಯಿಂದ ಬಿಎಸ್ಪಿಗೆ ತೀವ್ರ ಹಿನ್ನಡೆಯುಂಟಾಗಿದೆ.
Next Story