ಬೆಳ್ತಂಗಡಿ: ವ್ಯಕ್ತಿ ನಾಪತ್ತೆ
ಬೆಳ್ತಂಗಡಿ; ಧರ್ಮಸ್ಥಳ ಠಾಣಾ ವ್ಯಾಪ್ತಿಯ ಕನ್ಯಾಡಿ ನಿವಾಸಿ ನಿವೃತ್ತ ಇಂಜಿನಿಯರ್ ಸುಬಾಶ್ಚಂದ್ರ (61) ಎಂಬವರು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರು ಸೆ 14 ರಂದು ಮನೆಯಿಂದ ಉಜಿರೆಗೆಂದು ಹೋದವರು ಮನೆಗೆ ಹಿಂತಿರುಗಿ ಬರಲಿಲ್ಲ ಎನ್ನಲಾಗಿದ್ದು ಇವರಿಗಾಗಿ ಎಲ್ಲಡೆ ಹುಡುಕಿದರೂ ಯಾವುದೇ ಮಹಿತಗಳು ಸಿಗಲಿಲ್ಲ. ಇವರು ತನ್ನ ಮೊಬೈ;ಲ್ ಅನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದಾರೆ ಎನ್ನಲಾಗಿದ್ದು ತನ್ನನ್ನು ಯಾರೂ ಹುಡುಕುವುದು ಬೇಡ ಎಂದು ಪತ್ರ ಬರೆದಿಟ್ಟಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಅವರ ಪತ್ನಿ ವತ್ಸಲ ನೀಡಿರುವ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story