ಗುಜರಾತ್: ಕಾರ್ಖಾನೆಯ ಮೂವರು ಭದ್ರತಾ ಸಿಬ್ಬಂದಿಯ ಥಳಿಸಿ ಹತ್ಯೆ
ಭರೂಚ್, ಸೆ. 18: ಗುಜರಾತ್ನ ಭರೂಚಾ ಜಿಲ್ಲೆಯಲ್ಲಿ 25ರಿಂದ 30 ಜನರಿದ್ದ ಗುಂಪೊಂದು ದಾಳಿ ನಡೆಸಿದ ಪರಿಣಾಮ ಗ್ಲಾಸ್ ತಯಾರಿಸುವ ಕಾರ್ಖಾನೆಯ ಮೂವರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಅಲ್ಲದೆ, ಹಲವರು ಗಾಯಗೊಂಡಿದ್ದಾರೆ. ಈ ದಾಳಿಯ ಹಿಂದಿನ ನಿರ್ದಿಷ್ಟ ಕಾರಣ ಇದುವರೆಗೆ ತಿಳಿದು ಬಂದಿಲ್ಲ. ದರೋಡೆ ಮಾಡುವ ಉದ್ದೇಶ ಇದ್ದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಮಂಗಳವಾರ ತಡ ರಾತ್ರಿ ನಡೆದಿದೆ. ಅಂಕ್ಲೇಶ್ವರ ತಾಲೂಕಿನ ಉಟಿಯಾದಾರ ಗ್ರಾಮದಲ್ಲಿರುವ ಪಿ.ಜಿ. ಗ್ಲಾಸ್ ಕಂಪೆನಿಯ ಗೋಡೆ ಹಾರಿ ದುಷ್ಕರ್ಮಿಗಳು ಒಳ ಪ್ರವೇಶಿಸಿದ್ದಾರೆ ಹಾಗೂ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಮುಚ್ಚಿದ್ದ ಕಾರ್ಖಾನೆಯ ಆವರಣದಲ್ಲಿ ಇದ್ದ 6 ಮಂದಿ ಭದ್ರತಾ ಸಿಬ್ಬಂದಿಗಳ ಮೇಲೆ ದುಷ್ಕರ್ಮಿಗಳು ದೊಣ್ಣೆ ಹಾಗೂ ಕಬ್ಬಿಣದ ಪೈಪ್ಗಳಿಂದ ದಾಳಿ ನಡೆಸಿದ್ದಾರೆ ಎಂದು ಅಂಕ್ಲೇಶ್ವರ (ಗ್ರಾಮೀಣ) ಪೊಲೀಸ್ ಇನ್ಸ್ಪೆಕ್ಟರ್ (ಉಸ್ತುವಾರಿ) ಜಯರಾಜ್ ಸಿನ್ಹಾ ಚವಾಡ್ ಹೇಳಿದ್ದಾರೆ.
Next Story