ಪ್ಲಾಸ್ಟಿಕ್ ಚೀಲ ನೀಡಿಲ್ಲ ಎಂದು ಬೇಕರಿ ಉದ್ಯೋಗಿಗೆ ಇಟ್ಟಿಗೆಯಿಂದ ಹೊಡೆದು ಸಾಯಿಸಿದ ಗ್ರಾಹಕ
ಹೊಸದಿಲ್ಲಿ : ಈಶಾನ್ಯ ದಿಲ್ಲಿಯ ದಯಾಲ್ಪುರ್ ಪ್ರದೇಶದಲ್ಲಿನ ಬೇಕರಿಯೊಂದರಲ್ಲಿ ಕೆಲಸಕ್ಕಿದ್ದ 45 ವರ್ಷದ ಉದ್ಯೋಗಿಯೊಬ್ಬನಿಗೆ ತನಗೆ ಪ್ಲಾಸ್ಟಿಕ್ ಚೀಲ ನೀಡಿಲ್ಲ ಎಂಬ ಸಿಟ್ಟಿನಲ್ಲಿ ಗ್ರಾಹಕನೊಬ್ಬ ಆತನ ತಲೆಗೆ ಇಟ್ಟಿಗೆಯಿಂದ ಹೊಡೆದ ಕಾರಣ ಉಂಟಾದ ಗಂಭೀರ ಗಾಯಗಳಿಂದಾಗಿ ಉದ್ಯೋಗಿ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಮೃತ ಬೇಕರಿ ಉದ್ಯೋಗಿಯನ್ನು ಖಲೀಲ್ ಅಹ್ಮದ್ ಎಂದು ಗುರುತಿಸಲಾಗಿದೆ. ಘಟನೆ ಅಕ್ಟೋಬರ್ 15ರಂದು ನಡೆದಿತ್ತು. ಆರೋಪಿ ಫೈಝನ್ ಖಾನ್ ತಲೆಮರೆಸಿಕೊಂಡಿದ್ದು ಪೊಲೀಸರು ಆತನಿಗಾಗಿ ಶೋಧಿಸುತ್ತಿದ್ದಾರೆ. ಆತ ಪ್ಲಾಸ್ಟಿಕ್ ಚೀಲ ಕೇಳಿದಾಗ ಖಲೀಲ್ ನೀಡದೇ ಇದ್ದಾಗ ಇಬ್ಬರ ನಡುವೆ ವಾದವಿವಾದ ನಡೆದು ಸಿಟ್ಟಿನ ಭರದಲ್ಲಿ ಖಲೀಲ್ ಅಹ್ಮದ್ ತಲೆಗೆ ಫೈಝನ್ ಇಟ್ಟಿಗೆಯಿಂದ ಹೊಡೆದಿದ್ದ.
ಆರೋಪಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
Next Story