ಬಿಹಾರ: ಜಾನುವಾರು ವ್ಯಾಪಾರಿಯ ಥಳಿಸಿ ಹತ್ಯೆ
ಹೊಸದಿಲ್ಲಿ,ನ.13: ಮಾಲ್ಡಾದ ವಾರದ ಜಾನುವಾರು ಸಂತೆಗೆ ತೆರಳುತ್ತಿದ್ದ ಜಾನುವಾರಿ ವ್ಯಾಪಾರಿಯನ್ನು ಹತ್ಯೆಗೈದಿರುವ ಘಟನೆ ಬಿಹಾರದ ಕಟಿಹಾರ್ ಜಿಲ್ಲೆಯಲ್ಲಿ ಸಂಭವಿಸಿದೆ.
ಸೋಮವಾರ ರಾತ್ರಿ ಮುಹಮ್ಮದ್ ಜಮಾಲ್ ಸಂತೆಗೆ ಸಾಗಿಸುತ್ತಿದ್ದ ಜಾನುವಾರಿಗೆ ಬೈಕೊಂದು ಢಿಕ್ಕಿ ಹೊಡೆದಿತ್ತ. ಜಮಾಲ್ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದರೂ ಬೈಕ್ ಸವಾರ ಮತ್ತು ಆತನ ಜೊತೆಯಲ್ಲಿದ್ದ ಇತರರು ಆತನನ್ನು ಥಳಿಸಿ ಕೊಂದಿದ್ದಾರೆ. ಜಮಾಲ್ ಜೊತೆಯಲ್ಲಿದ್ದ ಸೋದರ ಮತ್ತು ಇತರ ಇಬ್ಬರು ಗುಂಪಿನಿಂದ ಪಾರಾಗುವಲ್ಲಿ ಸಫಲರಾಗಿದ್ದರು.
ಹಿಂದೆ ಜಾನುವಾರು ವ್ಯಾಪಾರ ಮಾಡುತ್ತಿದ್ದು,ಜಮಾಲ್ ವಿರುದ್ಧ ದ್ವೇಷವನ್ನು ಹೊಂದಿದ್ದ ಲೀಲಾಧರ ಎಂಬಾತ ಘಟನೆಯಲ್ಲಿ ಭಾಗಿಯಾಗಿದ್ದಾನೆ. ಬೈಕ್ ಜಾನುವಾರಿಗೆ ಢಿಕ್ಕಿ ಹೊಡೆದ ನೆಪದಲ್ಲಿ ಆತ ತನ್ನ ಸಹಚರರೊಂದಿಗೆ ಸೇರಿ ಜಮಾಲ್ಗೆ ಥಳಿಸಿದ್ದ. ಇದು ವೈಯಕ್ತಿಕ ದ್ವೇಷದ ಪ್ರಕರಣವಾಗಿದೆ ಎಂಂದು ಕಟಿಹಾರ್ ಎಸ್ಪಿ ವಿಕಾಸ ಕುಮಾರ ತಿಳಿಸಿದ್ದಾರೆ.
ಜಮಾಲ್ ಸೋದರ ಈ ಬಗ್ಗೆ ದೂರು ದಾಖಲಿಸಿದ್ದು,ಲೀಲಾಧರ,ಆತನ ಇಬ್ಬರು ಸೋದರರು ಮತ್ತು ತಂದೆಯನ್ನು ಪ್ರಮುಖ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.