ಜೆಎನ್ಯುನಲ್ಲಿ ವಿವೇಕಾನಂದರ ಪ್ರತಿಮೆ ಮೇಲೆ ಆಕ್ಷೇಪಾರ್ಹ ಸಂದೇಶ
ಹೊಸದಿಲ್ಲಿ, ನ. 14: ಜವಾಹಾರ್ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿ ಇನ್ನಷ್ಟೇ ಅನಾವರಣಗೊಳಿಸಬೇಕಾಗಿರುವ ಸ್ವಾಮಿ ವಿವೇಕಾನಂದ ಪ್ರತಿಮೆಯ ಪಾದ ಪೀಠದಲ್ಲಿ ಆಕ್ಷೇಪಾರ್ಹ ಸಂದೇಶಗಳು ಗುರುವಾರ ಪತ್ತೆಯಾಗಿದೆ.
ಈ ಬಗೆಗಿನ ವೀಡಿಯೊ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಆದರೆ, ವಿಶ್ವವಿದ್ಯಾನಿಲಯ ಈ ಘಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕೇಸರಿ ಬಣ್ಣದ ಬಟ್ಟೆ ಮುಚ್ಚಿದ ವಿವೇಕಾನಂದರ ಮೂರ್ತಿ ವಿಶ್ವವಿದ್ಯಾನಿಲಯದ ಆಡಳಿತ ಬ್ಲಾಕ್ನಲ್ಲಿ ಸ್ಥಾಪಿಸಲಾಗಿತ್ತು.
ಘಟನೆಯಲ್ಲಿ ತಾವು ಭಾಗಿಯಾಗಿಲ್ಲ ಎಂದು ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಒಕ್ಕೂಟ ಹೇಳಿದೆ. ಅಲ್ಲದೆ, ಶೀಘ್ರದಲ್ಲಿ ಹೇಳಿಕೆ ನೀಡಲಾಗುವುದು ಎಂದು ಒಕ್ಕೂಟ ತಿಳಿಸಿದೆ.
Next Story