ಪೌರತ್ವಕ್ಕೆ ಅರ್ಜಿ ಸಲ್ಲಿಸುವವರು ಧಾರ್ಮಿಕ ದೌರ್ಜನ್ಯದ ಪುರಾವೆ ನೀಡಲು ಅಸಾಧ್ಯ: ಬಿಜೆಪಿ ನಾಯಕ ಹಿಮಂತ ಶರ್ಮ
ಗುವಾಹಟಿ: ಪೌರತ್ವ ಕಾಯ್ದೆ ಅನ್ವಯ ಪೌರತ್ವಕ್ಕೆ ಅರ್ಜಿ ಸಲ್ಲಿಸುವವರು ತಾವು ಧಾರ್ಮಿಕ ದೌರ್ಜನ್ಯವೆದುರಿಸಿದ್ದೇವೆ ಎಂಬುದನ್ನು ಸಾಬೀತುಪಡಿಸುವ ಅಗತ್ಯವಿಲ್ಲ. ಆದರೆ ಅವರು ತಿಳಿಸಿದ್ದು ನಿಜವೆಂದು ದೃಢೀಕರಿಸಲು ಕೇಂದ್ರ ಸರಕಾರ ಒಂದು ಪ್ರಕ್ರಿಯೆಯನ್ನು ರೂಪಿಸಬಹುದು ಎಂದು ಅಸ್ಸಾಂ ಸಚಿವ ಹಾಗೂ ಬಿಜೆಪಿಯ ಪ್ರಮುಖ ನಾಯಕ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.
"ಧರ್ಮಾಧಾರಿತ ದೌರ್ಜನ್ಯಕ್ಕೆ ಯಾವುದೇ ಪುರಾವೆಯಿರುವುದಿಲ್ಲ. ಆದರೆ ಅವರು 2014ಕ್ಕಿಂತ ಮೊದಲು ಬಂದಿರುವ ಬಗ್ಗೆ ಪುರಾವೆ ಬೇಕಿದೆ. ಧರ್ಮಾಧಾರಿತ ದೌರ್ಜನ್ಯಕ್ಕೆ ಹೇಗೆ ಪುರಾವೆಯೊದಗಿಸಬಹುದು?, ಬಾಂಗ್ಲಾದೇಶದ ಯಾವುದಾದರೂ ಪೊಲೀಸ್ ಠಾಣೆ ಅವರಿಗೆ ಈ ಕುರಿತು ದಾಖಲೆ ಒದಗಿಸುವುದೇ?" ಎಂದು ಶರ್ಮ ಪ್ರಶ್ನಿಸಿದ್ದಾರೆ.
"ಆದರೆ ಆ ಜನರು ಹಿಂದೆ ಇದ್ದ ಸ್ಥಳದಲ್ಲಿ ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯಗಳ ಯಾವುದಾದರೂ ಘಟನೆಗಳು ನಡೆದಿವೆಯೇ ಎಂದು ಪರಿಶೀಲಿಸಲು ಭಾರತದ ಸರಕಾರ ಯಾವುದಾದರೂ ಆಂತರಿಕ ಪ್ರಕ್ರಿಯೆಯನ್ನು ಹೊಂದಲಿದೆ'' ಎಂದು ಶರ್ಮ ಹೇಳಿದರು.
Next Story