ಸಿಎಎ, ಎನ್ಆರ್ ಸಿ ವಿವಾದ: ಅಮಿತ್ ಶಾಗೆ ಸವಾಲೆಸೆದ ಪ್ರಶಾಂತ್ ಕಿಶೋರ್
ಹೊಸದಿಲ್ಲಿ: ಎಷ್ಟೇ ಪ್ರತಿಭಟನೆಗಳು ನಡೆದರೂ ಪೌರತ್ವ ಕಾಯ್ದೆಯನ್ನು ಜಾರಿಗೊಳಿಸಿಯೇ ತೀರುವುದಾಗಿ ಮಂಗಳವಾರ ಲಕ್ನೋದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಗೆ ಪ್ರತಿಯಾಗಿ ಜೆಡಿ(ಯು) ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಅಮಿತ್ ಶಾಗೆ ಸವಾಲೆಸೆದಿದ್ದಾರೆ. ಪೌರತ್ವ ತಿದ್ದುಪಡಿ ಕಾಯಿದೆ ಹಾಗೂ ಎನ್ಆರ್ಸಿಯನ್ನು "ಪ್ರಯತ್ನಿಸಿ ಜಾರಿಗೊಳಿಸಿ'' ಎಂದು ಅವರು ಟ್ವೀಟ್ ಮೂಲಕ ಶಾ ಗೆ ಹೇಳಿದ್ದಾರೆ.
"ನಾಗರಿಕರ ಅಸಮ್ಮತಿಯನ್ನು ಪರಿಗಣಿಸದೇ ಇರುವುದು ಯಾವುದೇ ಸರಕಾರದ ಶಕ್ತಿಯ ಸಂಕೇತವಾಗದು ಅಮಿತ್ ಶಾ ಜೀ, ಸಿಎಎ_ಎನ್ಆರ್ ಸಿ ವಿರುದ್ಧ ಪ್ರತಿಭಟಿಸುತ್ತಿರುವವರ ಬಗ್ಗೆ ನಿಮಗೆ ಯಾವುದೇ ಕಾಳಜಿಯಿಲ್ಲವೆಂದಾದರೆ ದೇಶದೆದುರು ಘೋಷಿಸಿದಂತೆ ನೀವೇಕೆ ಮುಂದುವರಿದು ನೀವು ಹೇಳಿದ ಸರತಿಯಂತೆಯೇ ಸಿಎಎ ಹಾಗೂ ಎನ್ಆರ್ ಸಿಯನ್ನು ಜಾರಿಗೊಳಿಸಲು ಪ್ರಯತ್ನಿಸಬಾರದು?'' ಎಂದು ಪ್ರಶಾಂತ್ ಕಿಶೋರ್ ತಮ್ಮ ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.
Next Story