ಸಿಎಎ ಪರ ರ್ಯಾಲಿಯಲ್ಲಿ ಜಟಾಪಟಿ: ಹಲವು ಅಧಿಕಾರಿಗಳಿಗೆ ಹೈಕೋರ್ಟ್ ನೋಟಿಸ್
Photo: Twitter
ಭೋಪಾಲ್: ರವಿವಾರ ಮಧ್ಯ ಪ್ರದೇಶದ ರಾಜಘರ್ ಜಿಲ್ಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ಪರ ರ್ಯಾಲಿಯೊಂದರಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಧಿಕಾರಿಗಳ ನಡುವೆ ಜಟಾಪಟಿ ನಡೆದಿದೆಯೆನ್ನಲಾಗಿದ್ದು ಈ ಸಂದರ್ಭ ಬಿಜೆಪಿ ಕಾರ್ಯಕರ್ತರಿಗೆ ಕಪಾಳಮೋಕ್ಷಗೈದಿದ್ದರೆನ್ನಲಾದ ಹಲವಾರು ಅಧಿಕಾರಿಗಳಿಗೆ ಅಲ್ಲಿನ ಹೈಕೋರ್ಟಿನ ಇಂದೋರ್ ಪೀಠ ನೋಟಿಸ್ ಜಾರಿಗೊಳಿಸಿದೆ.
ಘಟನೆಯ ವೀಡಿಯೋ ಕೂಡ ಹರಿದಾಡುತ್ತಿದ್ದು ರ್ಯಾಲಿಯಲ್ಲಿ ಎರಡು ಗುಂಪುಗಳ ನಡುವೆ ವಾಗ್ಯುದ್ಧ ನಡೆಯುತ್ತಿರುವುದು ಕಾಣಿಸುತ್ತದೆ. ವೀಡಿಯೋದಲ್ಲಿ ಮಹಿಳಾ ಅಧಿಕಾರಿಯೊಬ್ಬರು ಬಿಜೆಪಿ ಕಾರ್ಯಕರ್ತನೆಂದು ತಿಳಿಯಲಾದ ವ್ಯಕ್ತಿಗೆ ಕಪಾಳಮೋಕ್ಷಗೈಯ್ಯುತ್ತಿರುವುದು ಕಾಣಿಸುತ್ತದೆ. ಪ್ರತಿಭಟನಾಕಾರರು ಜಿಲ್ಲಾ ಕಲೆಕ್ಟರ್ ಮತ್ತಿತರ ಅಧಿಕಾರಿಗಳಿಗೂ ಹಲ್ಲೆಗೈದಿದ್ದಾರೆನ್ನಲಾಗಿದೆ.
ರವಿವಾರದ ರ್ಯಾಲಿಗೆ ಅನುಮತಿಯಿರಲಿಲ್ಲ ಎಂದು ಹೇಳಲಾಗಿದೆ. ನಗರದಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಸಿಎಎ ಬೆಂಬಲಿಗರು ರ್ಯಾಲಿ ನಡೆಸಿದ್ದರು.
#WATCH Madhya Pradesh: A protestor pulls hair of Rajgarh Deputy Collector Priya Verma, after she hits BJP workers and drags them. The clash broke out during a demonstration in support of #CAA. pic.twitter.com/7ckpZaFBkJ
— ANI (@ANI) January 19, 2020
राजगढ़ में नागरिकता कानून के समर्थन में निकली रैली में कलेक्टर ने जड़ दिये बीजेपी कार्यकर्ता पर थप्पड़! @ndtvindia @shailendranrb @ajaiksaran #UPBJYMSUPPORTSCAA #CAA_NRCProtests #CAA2019 pic.twitter.com/ZlSDIakesv
— Anurag Dwary (@Anurag_Dwary) January 19, 2020