BIG Breaking News: 'ಅಕ್ಷರ ಸಂತ' ಹರೇಕಳ ಹಾಜಬ್ಬರಿಗೆ 'ಪದ್ಮಶ್ರೀ' ಗೌರವ
ಮಕ್ಕಳ ಶಿಕ್ಷಣದ ಕನಸು ಕಂಡ ಕಿತ್ತಳೆ ವ್ಯಾಪಾರಿಗೆ ದೇಶದ ನಾಲ್ಕನೆ ಅತ್ಯುನ್ನತ ಪುರಸ್ಕಾರ
ಮಂಗಳೂರು: ಬಡಮಕ್ಕಳಿಗಾಗಿ ಸ್ವಂತ ದುಡಿಮೆಯಲ್ಲಿ ಶಾಲೆ ನಿರ್ಮಿಸಿದ, ನೂರಾರು ಮಕ್ಕಳ ವಿದ್ಯಾರ್ಜನೆಗೆ ನೆರವಾದ ದಕ್ಷಿಣ ಕನ್ನಡದ ಕಿತ್ತಳೆ ವ್ಯಾಪಾರಿ 'ಅಕ್ಷರ ಸಂತ' ಹರೇಕಳ ಹಾಜಬ್ಬ 2020ನೆ ಸಾಲಿನ 'ಪದ್ಮಶ್ರೀ' ಗೌರವಕ್ಕೆ ಆಯ್ಕೆಯಾಗಿದ್ದಾರೆ.
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಇಂದು ದೇಶದ ನಾಲ್ಕನೆ ಅತ್ಯುನ್ನತ ಪುರಸ್ಕಾರವಾದ 'ಪದ್ಮಶ್ರೀ' ಪ್ರಶಸ್ತಿ ವಿಜೇತರ ಪಟ್ಟಿಯನ್ನು ಘೋಷಿಸಿದೆ.
Next Story