ಹೈದರಾಬಾದ್ಗೆ ಆಗಮಿಸಿದ್ದ ಭೀಮ್ ಆರ್ಮಿ ಮುಖ್ಯಸ್ಥ ಆಝಾದ್ ಪೊಲೀಸ್ ವಶಕ್ಕೆ
ಸಿಎಎ ವಿರುದ್ಧ ಪ್ರತಿಭಟನೆ
ಹೈದರಾಬಾದ್,ಜ.26: ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್(ಟಿಸ್)ನ ವಿದ್ಯಾರ್ಥಿ ಒಕ್ಕೂಟವು ರವಿವಾರ ಹೈದರಾಬಾದ್ನಲ್ಲಿ ಹಮ್ಮಿಕೊಂಡಿದ್ದ ಸಿಎಎ ವಿರುದ್ಧದ ಪ್ರತಿಭಟನಾ ಕಾರ್ಯಕ್ರಮದಲ್ಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ ಆಝಾದ್ ಅವರನ್ನು ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಮೆಹ್ದಿಪಟ್ನಂ ಎಂಬಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಟಿಸ್ ವಿದ್ಯಾರ್ಥಿ ಒಕ್ಕೂಟವು ಗಣರಾಜ್ಯೋತ್ಸವ ಸಂದರ್ಭದಲ್ಲಿ ಸಿಎಎ,ಎನ್ಆರ್ಸಿ ಮತ್ತು ಎನ್ಪಿಆರ್ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು,ಆಝಾದ್ ಅವರು ಎರಡು ಪ್ರತ್ಯೇಕ ಸಮಾವೇಶಗಳಲ್ಲಿ ವಿದ್ಯಾರ್ಥಿಗಳನ್ನು ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದರು. ಆಝಾದ್ ಅವರು ರವಿವಾರ ಮೆಹ್ದಿಪಟ್ನಂನಲ್ಲಿ ಅಖಿಲ ಭಾರತ ದಲಿತ ಮುಸ್ಲಿಮ್ ಆದಿವಾಸಿ ಪ್ರಗತಿಪರ ರಂಗವು ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದರು.
Next Story