ಅನಿರ್ದಿಷ್ಟವಾಗಿ ಸಾರ್ವಜನಿಕ ರಸ್ತೆ ತಡೆ ನಡೆಸಬಾರದು: ಶಾಹಿನ್ ಬಾಗ್ ಬಗ್ಗೆ ಸುಪ್ರೀಂ ಕೋರ್ಟ್
ಕೇಂದ್ರ, ದಿಲ್ಲಿ ಸರಕಾರಕ್ಕೆ ನೋಟಿಸ್
ಹೊಸದಿಲ್ಲಿ: ಶಾಹಿನ್ ಬಾಗ್-ಕಲಿನಿದಿ ಕುಂಜ್ ರಸ್ತೆ ತಡೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಅನಿರ್ದಿಷ್ಟವಾಗಿ ರಸ್ತೆ ತಡೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಜನರಿಗೆ ಪ್ರತಿಭಟಿಸಲು ಅವಕಾಶವಿದೆ. ಆದರೆ ಪ್ರತಿಭಟನೆಗೆ ಮೀಸಲಾದ ಪ್ರದೇಶದಲ್ಲಿ ನಡೆಸಬೇಕು ಮತ್ತು ಇದರಿಂದ ಇತರರಿಗೆ ತೊಂದರೆಯಾಗಬಾರದು ಎಂದು ಹೇಳಿರುವ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರ, ದಿಲ್ಲಿ ಸರಕಾರ ಮತ್ತು ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆ ದಿನಾಂಕವನ್ನು ಫೆಬ್ರವರಿ 17ಕ್ಕೆ ನಿಗದಿಪಡಿಸಿದೆ.
Next Story