ಎಲ್ಗಾರ್ ಪರಿಷತ್ ಪ್ರಕರಣ: ಸಿಟ್ ತನಿಖೆಗೆ ಕಾನೂನು ನೆರವು ಕೋರಿದ ಮಹಾರಾಷ್ಟ್ರ ಸರಕಾರ
ಮುಂಬೈ, ಫೆ. 16: ಎಲ್ಗಾರ್ ಪರಿಷತ್ ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಸಿಟ್) ರೂಪಿಸಲು ರಾಜ್ಯ ಸರಕಾರ ಕಾನೂನು ಅಭಿಪ್ರಾಯವನ್ನು ಕೋರಿದೆ ಎಂದು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ತಿಳಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಗಾರ್ ಪರಿಷತ್ ಪ್ರಕರಣದ ತನಿಖೆ ನಡೆಸಲು ಸಿಟ್ ರೂಪಿಸಬೇಕೇ ? ಬೇಡವೇ ? ಎಂಬ ಬಗ್ಗೆ ಕಾನೂನು ಅಬಿಪ್ರಾಯ ಕೋರಿ ಅಡ್ವೊಕೇಟ್ ಜನರಲ್ಗೆ ಮಹಾರಾಷ್ಟ್ರ ಗೃಹ ಇಲಾಖೆಗೆ ಪತ್ರ ಬರೆದಿದೆ ಎಂದು ಹೇಳಿದರು. ಎಲ್ಗಾರ್ ಪರಿಷತ್ ಪ್ರಕರಣವನ್ನು ಪುಣೆ ನ್ಯಾಯಾಲಯ ಮುಂಬೈಯಲ್ಲಿರುವ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ವರ್ಗಾಯಿಸಿ ಆದೇಶ ನೀಡಿದ ಬಳಿಕ ಈ ಬೆಳವಣಿಗೆ ನಡೆದಿದೆ.
Next Story