ರಾಜಸ್ಥಾನ: ಬಸ್ ನದಿಗೆ ಬಿದ್ದು 24 ಮಂದಿ ಮೃತ್ಯು
ಬುಂಡಿ,ಫೆ.26:ಮದುವೆ ದಿಬ್ಬಣದ ಬಸ್ ನದಿಗೆ ಉರಳಿ ಬಿದ್ದ ಪರಿಣಾಮವಾಗಿ 24 ಮಂದಿ ಮೃತಪಟ್ಟ ಘಟನೆ ರಾಜಸ್ಥಾನದ ಬುಂಡಿ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ.
30 ಮಂದಿ ಪ್ರಯಾಣಿಸುತ್ತಿದ್ದ ಬಸ್ ಕೋಟಾ ದೌಸಾ ಮೆಗಾ ಹೆದ್ದಾರಿ ಪಕ್ಕದ ಮೇಜ್ ನದಿಯ ಸೇತುವೆಯ ಮೇಲೆ ಹಾದು ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿ ಬಿದ್ದಿದೆ. ಈ ಘಟನೆಯಲ್ಲಿ ಐದು ಮಂದಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ ಕೋಟಾದಿಂದ ಸವಾಯಿ ಮಾಧೋಪುರಕ್ಕೆ ತೆರಳುತ್ತಿತ್ತು. ಬಸ್ ಲೆಖಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಪಪ್ಡಿ ಗ್ರಾಮದ ಬಳಿ ಬಸ್ ಮೇಜ್ ನದಿಗೆ ಉರಳಿ ಬಿದ್ದಿದೆ ಎಂದು ತಿಳಿದು ಬಂದಿದೆ.
ಪರಿಣಾಮವಾಗಿ 13 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, 10 ಮಂದಿ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟರು. ಸಾವಿಗೀಡಾದವರಲ್ಲಿ
11 ಪುರುಷರು, 10 ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದಾರೆ.
Next Story