ಯೆಸ್ ಬ್ಯಾಂಕ್ ಬಿಕ್ಕಟ್ಟಿಗೂ ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ಸನ್ನೇ ದೂರಬಹುದು: ಚಿದಂಬರಂ ವ್ಯಂಗ್ಯ
ಹೊಸದಿಲ್ಲಿ : ಭಾರತದ ಐದನೇ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆಗಿರುವ ಯೆಸ್ ಬ್ಯಾಂಕ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ನಾಯಕ ಹಾಗೂ ಮಾಜಿ ವಿತ್ತ ಸಚಿವ ಪಿ ಚಿದಂಬರಂ ವಾಗ್ದಾಳಿ ನಡೆಸಿದ್ದಾರೆ.
``ಯುಪಿಎ ಸರಕಾರವನ್ನು ದೂರಿ ವಿತ್ತ ಸಚಿವೆ ಹೇಳಿಕೆ ನೀಡಿದ್ದಾರೆಂದು ತಿಳಿಯಿತು. ಅರಿವಿಲ್ಲದಂತೆ ಇರುವ ಸರಕಾರವಿರುವಾಗ ಇದು ಸಹಜ. ನಾನು ಟ್ವೀಟ್ ಮಾಡಿದ ಸಂಖ್ಯೆಗಳ ಕುರಿತು ವಿತ್ತ ಸಚಿವೆಗೆ ತಿಳಿದಿದೆಯೇ? ಗೊತ್ತಿದ್ದರೆ, ಬ್ಯಾಂಕ್ನ ಸಾಲದ ಪ್ರಮಾಣ ರೂ 55,633 ಕೋಟಿಯಿಂದ ಐದು ವರ್ಷಗಳಲ್ಲಿ ರೂ 2,41,499 ಕೋಟಿಗೆ ಹೇಗೆ ಏರಿಕೆಯಾಯಿತೆಂದು ಆಕೆ ವಿವರಿಸಬಲ್ಲರೇ,? ಯಾರಿಗೆ ಗೊತ್ತು ? 2014 ಹಾಗೂ 2019 ನಡುವೆ ಸಾಲದ ಪ್ರಮಾಣ ಏರಿಕೆಗೂ ವಿತ್ತ ಸಚಿವೆ ಯುಪಿಎಯನ್ನೇ ದೂರಬಹುದು'' ಎಂದು ಚಿದಂಬರಂ ಕುಟುಕಿದ್ದಾರೆ.
Next Story