ಕೇರಳದಲ್ಲಿ ವಲಸೆ ಕಾರ್ಮಿಕರಿಗೆ ಸಿಂಪಡಿಸಿದ್ದು ಸೋಪ್ ಮಿಶ್ರಿತ ನೀರು: ಅಧಿಕಾರಿಗಳ ಸ್ಪಷ್ಟೀಕರಣ
ವೀಡಿಯೋ ವೈರಲ್
ತಿರುವನಂತಪುರಂ: ಉತ್ತರ ಪ್ರದೇಶದ ಬರೇಲಿಯಲ್ಲಿ ವಲಸಿಗ ಕಾರ್ಮಿಕರ ಗುಂಪಿನ ಮೇಲೆ ರವಿವಾರ ರಾಸಾಯನಿಕ ದ್ರಾವಣವನ್ನು ಸಿಂಪಡಿಸಿದ ಅಧಿಕಾರಿಗಳು ಭಾರೀ ಆಕ್ರೋಶ ಎದುರಿಸುತ್ತಿರುವಂತೆಯೇ ಕೇರಳದ್ದು ಎಂದು ಹೇಳಲಾದ ಅಂತಹುದೇ ಇನ್ನೊಂದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಪಷ್ಟೀಕರಣ ನೀಡಿದ ಅಲ್ಲಿನ ಅಗ್ನಿಶಾಮಕ ದಳ ಅಧಿಕಾರಿಗಳು ತಾವು ಸೋಪ್ ಮತ್ತು ನೀರಿನ ಮಿಶ್ರಣವನ್ನು ಸಿಂಪಡಿಸಿದ್ದಾಗಿ ಹೇಳಿದ್ದಾರೆ.
ಕೇರಳದಲ್ಲಿ ಕಳೆದ ವಾರ ಕೇರಳ-ಕರ್ನಾಟಕ ಗಡಿಯ ಮುತ್ತುಂಗ ಎಂಬಲ್ಲಿ 40 ಮಂದಿ ಬೈಕ್ ಸವಾರರ ಗುಂಪೊಂದರ ಮೇಲೆ ದ್ರಾವಣ ಸಿಂಪಡಣೆ ನಡೆದಿರುವ ವೀಡಿಯೋ ಕೂಡ ಸುದ್ದಿಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳ ಸ್ಪಷ್ಟೀಕರಣ ಬಂದಿದೆ.
``ಜಾತಿ, ಧರ್ಮಗಳನ್ನು ಪರಿಗಣಿಸದೆ ಎಲ್ಲರ ಮೇಲೆಯೂ ಈ ದ್ರಾವಣ ಸಿಂಪಡಿಸಲಾಗಿತ್ತು. ಆ ಸಂದರ್ಭ ವಯನಾಡ್ನಲ್ಲಿ ಒಂದೇ ಒಂದು ಕೋವಿಡ್-19 ಪ್ರಕರಣಗಳು ವರದಿಯಾಗಿರಲಿಲ್ಲ'' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
For those questioning UP's move to spray disinfectant on migrants. Well, this video is from Kerala. Kerala Fire Service personnel spraying disinfectant on those who are entering the state.
— Kushal Kumar Sinha (@KushalSinha001) March 30, 2020
Any thoughts on this ?
Video credits - @CjVarghese96 pic.twitter.com/5mWmG4OTm8