ಉತ್ತರಾಖಂಡ ಸಚಿವನಿಗೆ ಸೋಂಕು ದೃಢ
ಎರಡು ದಿನಗಳ ಹಿಂದೆ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದ ಸಚಿವ ಸತ್ಪಾಲ್
ಡೆಹ್ರಾಡೂನ್, ಮೇ. 31: ಉತ್ತರಖಂಡದ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್ ಅವರಿಗೆ ವೈದ್ಯಕೀಯ ತಪಾಸಣೆಯಲ್ಲಿ ಕೊರೋನ ಪಾಸಿಟಿವ್ ಬಂದಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ. ಶನಿವಾರ ಸಚಿವರ ಪತ್ನಿ ಅಮೃತಾ ರಾವತ್ಗೆ ಕೊರೋನ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿತ್ತು.
ಸತ್ಪಾಲ್ ಅವರ ಪತ್ನಿಗೆ ಸೋಂಕು ತಗಲಿರುವುದು ಪತ್ತೆಯಾದ ಬೆನ್ನಲ್ಲೇ ಸಚಿವರು ಹಾಗೂ ಅವರ ಅಧಿಕೃತ ನಿವಾಸದಲ್ಲಿರುವ ಇತರ ಇಂತರ ಕುಟುಂಬ ಸದಸ್ಯರನ್ನ್ನು ಕ್ವಾರಂಟೈನ್ನಲ್ಲಿರಿಸಲಾಗಿತ್ತು.
ಸತ್ಪಾಲ್ ಮಹಾರಾಜ್ ಅವರು ಶುಕ್ರವಾರ ಸಂಪುಟ ಸಭೆಯಲ್ಲಿ ಪಾಲ್ಗೊಂಡಿದ್ದರೆಂದು ತಿಳಿದುಬಂದಿದೆ.
ಮಾಜಿ ಸಚಿವೆಯೂ ಆಗಿರುವ ಅಮೃತಾ ರಾವತ್ ಅವರನ್ನು ರಿಶಿಕೇಶ್ನಲ್ಲಿರುವ ಏಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಅಮೃತಾ ರಾವತ್ ಅವರು ಹಿಂದಿನ ಹರೀಶ್ ರಾವತ್ ಸರಕಾರದಲ್ಲಿ ಸಚಿವೆಯಾಗಿದ್ದರು.
Next Story