ವಕೀಲರಿಗೆ ಕೊರೋನ ವೈರಸ್ ಸೋಂಕು: ನ್ಯಾಯಾಲಯ ಎರಡು ದಿನ ಬಂದ್
ಬಾಬರಿ ವಿಚಾರಣೆ
ಲಕ್ನೋ,ಜೂ.29: ಇಬ್ಬರು ವಕೀಲರು ಕೊರೋನ ವೈರಸ್ಗೆ ಪಾಸಿಟಿವ್ ಆಗಿರುವ ಹಿನ್ನೆಲೆಯಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ಇಲ್ಲಿಯ ವಿಶೇಷ ಸಿಬಿಐ ನ್ಯಾಯಾಲಯವನ್ನು ಎರಡು ದಿನಗಳ ಕಾಲ ಮುಚ್ಚಲಾಗಿದೆ.
ನಿಗದಿತ ಕಲಾಪದಂತೆ ಮಾಜಿ ಉಪಪ್ರಧಾನಿ ಎಲ್.ಕೆ.ಆಡ್ವಾಣಿಯವರು ಬುಧವಾರ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ತನ್ನ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಬೇಕಿತ್ತು.
ನ್ಯಾಯಾಲಯವು ಸದ್ಯ ಸಿಪಿಸಿಯ ಕಲಂ 313ರಡಿ 32 ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದೆ. ಇದಕ್ಕೂ ಮುನ್ನ ಅದು ಪ್ರಾಸಿಕ್ಯೂಷನ್ ಸಾಕ್ಷಿಗಳ ವಿಚಾರಣೆಯನ್ನು ನಡೆಸಿತ್ತು.
Next Story