ವಿಕಾಸ್ ದುಬೆ ಎನ್ ಕೌಂಟರ್: ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಈ 2 ವಿಡಿಯೋಗಳು
ಹೊಸದಿಲ್ಲಿ: ಕಾನ್ಪುರ್ ನಲ್ಲಿ ಇತ್ತೀಚೆಗೆ ಎಂಟು ಪೊಲೀಸರ ಹತ್ಯೆಗೆ ಕಾರಣನಾದ ಗ್ಯಾಂಗ್ ಸ್ಟರ್ ವಿಕಾಸ್ ದುಬೆಯನ್ನು ಪೊಲೀಸರು ಇಂದು ಬೆಳಗ್ಗೆ ಮಧ್ಯ ಪ್ರದೇಶದಿಂದ ಉತ್ತರಪ್ರದೇಶದ ಕಾನ್ಪುರಕ್ಕೆ ಕರೆತರುವ ವೇಳೆಗೆ ಎನ್ ಕೌಂಟರ್ ನಲ್ಲಿ ಹತ್ಯೆಗೈದಿದ್ದಾರೆ. ಈ ಘಟನೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಆತನನ್ನು ಕರೆತರಲಾಗುತ್ತಿದ್ದ ವಾಹನ ಮಳೆಯಿಂದಾಗಿ ಉರುಳಿ ಬಿದ್ದ ನಂತರ ಆತ ಪೊಲೀಸರ ಬಂದೂಕನ್ನು ಸೆಳೆದು ಗುಂಡು ಹಾರಿಸಿ ತಪ್ಪಿಸಲೆತ್ನಿಸಿದಾಗ ಎನ್ ಕೌಂಟರ್ ನಲ್ಲಿ ಸಾಯಿಸಲಾಯಿತು ಎಂಬುದು ಪೊಲೀಸರ ವಾದವಾಗಿದ್ದರೂ ಈ ಕುರಿತಂತೆ ಹರಿದಾಡುತ್ತಿರುವ ಎರಡು ವೀಡಿಯೋಗಳು ಬೇರೇನನ್ನೋ ಹೇಳುತ್ತಿವೆ.
► ವಿಕಾಸ್ ದುಬೆಯಿದ್ದ ಹಾಗೂ ಬೆಂಗಾವಲು ಪೊಲೀಸರಿದ್ದ ಮೂರು ಕಾರುಗಳು ಟೋಲ್ ಬೂತ್ ಒಂದರಿಂದ ಬೆಳಿಗ್ಗೆ 4 ಗಂಟೆ ಸುಮಾರಿಗೆ ಹಾದು ಹೋಗುವಾಗ ವಿಕಾಸ್ ದುಬೆ ಬೇರೊಂದು ಕಾರಿನಲ್ಲಿದ್ದ ಹಾಗೂ ನಂತರ ಉರುಳಿ ಬಿದ್ದ ಕಾರಿನಲ್ಲಲ್ಲ ಎಂದು ತಿಳಿಯುತ್ತದೆ. ಆತನನ್ನು ಇನ್ನೊಂದು ಕಾರಿನಲ್ಲಿ ಮತ್ತೆ ಕುಳ್ಳಿರಿಸಲಾಗಿತ್ತೇ ಎಂಬ ಬಗ್ಗೆ ಪೊಲೀಸರಿನ್ನೂ ಏನನ್ನೂ ಹೇಳಿಲ್ಲ.
► ಎನ್ ಕೌಂಟರ್ ನಡೆಯುವುದಕ್ಕಿಂತ ಅರ್ಧ ಗಂಟೆ ಮೊದಲು ಸುಮಾರು 6.30ರ ಹೊತ್ತಿಗಿನ ಇನ್ನೊಂದು ವೀಡಿಯೋದಲ್ಲಿ ಪೊಲೀಸ್ ವಾಹನಗಳ ಹಿಂದಿನಿಂದ ಸಾಗುತ್ತಿದ್ದ ಪತ್ರಕರ್ತರ ಕಾರುಗಳನ್ನು ಪೊಲೀಸರು ತಡೆಯುತ್ತಿರುವುದು ಕಾಣಿಸುತ್ತದೆ. ಪೊಲೀಸರು ಮಾಧ್ಯಮ ಮಂದಿಯ ವಾಹನಗಳನ್ನು ಕಾನ್ಪುರ್ ನ ಸಚೆಂದ್ರಿ ಪ್ರದೇಶ ಸಮೀಪ ಆಗ ತಡೆದಿದ್ದರು.
► ವಿಕಾಸ್ ದುಬೆಗೆ ರಕ್ಷಣೆ ಕೋರಿ ಕಳೆದ ರಾತ್ರಿ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿರುವ ಅಪೀಲೊಂದು ರಾಜ್ಯದಲ್ಲಿ ಇತ್ತೀಚೆಗೆ ನಡೆದ ಎನ್ ಕೌಂಟರ್ ಗಳ ಕುರಿತಂತೆ ಸಿಬಿಐ ತನಿಖೆಗೆ ಆಗ್ರಹಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
► ಸ್ಥಳದಲ್ಲಿ ಬಂದೂಕಿನ ಶಬ್ದಗಳು ಕೇಳಿ ಬಂದವು. ಆದರೆ ನಾವು ಅತ್ತ ನಡೆದಾಗ ಪೊಲೀಸರು ನಮಗೆ ದೂರ ಹೋಗುವಂತೆ ಹೇಳಿದರು ಎಂದು ದಾರಿಹೋಕರೊಬ್ಬರು ಹೇಳಿದ್ದಾರೆ.
►60 ಪ್ರಕರಣಗಳಿರುವ ಆರೋಪಿಯೊಬ್ಬನಿಗೆ ಕೈಕೋಳಗಳನ್ನು ಯಾಕೆ ಹಾಕಿರಲಿಲ್ಲ? ಎನ್ನುವ ಪ್ರಶ್ನೆಯೂ ಇದೆ. ಏಕೆಂದರೆ ಕಾರು ಪಲ್ಟಿಯಾದಾಗ ವಿಕಾಸ್ ದುಬೆ ಗನ್ ಕದ್ದು , ಕಾರಿನ ಮೇಲೆ ಹತ್ತಿ ಓಡಲು ನೋಡಿದ ಎಂದು ಪೊಲೀಸರು ಹೇಳುತ್ತಿದ್ದಾರೆ.
#WATCH Media persons, who were following the convoy bringing back gangster Vikas Dubey, were stopped by police in Sachendi area of Kanpur before the encounter around 6.30 am in which the criminal was killed. (Earlier visuals) pic.twitter.com/K1B56NGV5p
— ANI UP (@ANINewsUP) July 10, 2020