‘ನಾವು ಪಕ್ಷದ ನಿಷ್ಠಾವಂತ ಸೈನಿಕರು’: ಉಲ್ಟಾ ಹೊಡೆದ ಮೂವರು ಪೈಲಟ್ ಬೆಂಬಲಿಗ ಶಾಸಕರು
ಜೈಪುರ,ಜು.16: ಸಚಿನ್ ಪೈಲಟ್ ಜೊತೆ ದಿಲ್ಲಿಗೆ ತೆರಳಿದ್ದ ಮೂವರು ಕಾಂಗ್ರೆಸ್ ಶಾಸಕರು ಈಗ ಯುಟರ್ನ್ ಹೊಡೆದಿದ್ದು, ತಾವು ಪಕ್ಷದ ನಿಜವಾದ ನಿಷ್ಠಾವಂತ ಸೈನಿಕರೆಂದು ಘೋಷಿಸಿದ್ದಾರೆ.
ಸಚಿನ್ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಶಾಸಕ ರೋಹಿತ್ ಬೋಹ್ರಾ ಅವರು ಇಂದು ಸುದ್ದಿಸಂಸ್ಥೆಯೊಂದಕ್ಕೆ ಹೇಳಿ ನೀಡಿ, ತಾನು ವೈಯಕ್ತಿಕ ಕಾರ್ಯದ ನಿಮಿತ್ತ ಹೊಸದಿಲ್ಲಿಗೆ ತೆರಳಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಉಳಿದ ಇಬ್ಬರು ಶಾಸಕರು ಕೂಡಾ ತಮ್ಮ ಸ್ವಂತ ಕೆಲಸಕ್ಕಾಗಿ ದಿಲ್ಲಿಗೆ ಧಾವಿಸಿದ್ದರೆಂದು ರೋಹಿತ್ ತಿಳಿಸಿದ್ದಾರೆ.
ದಿಲ್ಲಿಗೆ ಶನಿವಾರ ತೆರಳಿದ್ದ ಈ ಮೂವರು ಶಾಸಕರು ಇಂದು ಜೈಪುರಕ್ಕೆ ಪುನರಾಗಮಿಸಿದ್ದಾರೆ.
Next Story