ಕಾನ್ಪುರ ಎನ್ಕೌಂಟರ್: ಇನ್ನೋರ್ವ ಆರೋಪಿಯ ಬಂಧನ
ಕಾನ್ಪುರ, ಆ. 4: ಕಳೆದ ತಿಂಗಳ ಕಾನ್ಪುರದಲ್ಲಿ ನಡೆದ ಹೊಂಚು ದಾಳಿಗೆ ಸಂಬಂಧಿಸಿ ಇನ್ನೋರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಉತ್ತರಪ್ರದೇಶದ ಪೊಲೀಸರು ತಿಳಿಸಿದ್ದಾರೆ.
ಕಾನ್ಪುರ ಹೊಂಚು ದಾಳಿಗೆ ಸಂಬಂಧಿಸಿ ಚೌಬೆಪುರದ ನಿವಾಸಿ ರಾಮ್ ಸಿಂಗ್ ಯಾದವ್ನನ್ನು ಬಂಧಿಸಲಾಗಿದೆ. ದಾಳಿಯ ಹಿಂದಿನ ಪಿತೂರಿಗಾರರ ಕುರಿತು ಮಾಹಿತಿ ಪಡೆಯಲು ಯಾದವ್ನನ್ನು ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ವಿಶೇಷ ಕಾರ್ಯ ಪಡೆಯ ಐಜಿ ಅಮಿತಾಬ್ ಯಶ್ ತಿಳಿಸಿದ್ದಾರೆ. ಹೊಂಚು ದಾಳಿಯಲ್ಲಿ ಬಳಸಲಾದ ಶಸ್ತ್ರಾಸ್ತ್ರಗಳನ್ನು ಎಲ್ಲಿ ವಿಲೇವಾರಿ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಶರಣಾದ ಅಥವಾ ಬಂಧಿತರಾದ 8 ಮಂದಿಯಲ್ಲಿ ಯಾದವ್ ಕೂಡ ಒಬ್ಬ.
ಜುಲೈ 2 ಹಾಗೂ 3ರ ನಡುವೆ ಕಾನ್ಪುರದ ಸಮೀಪದ ಗ್ರಾಮದಲ್ಲಿ ನಡೆದ ಹೊಂಚು ದಾಳಿಯಲ್ಲಿ ಭೂಗತ ಪಾತಕಿಯ ಅನುಚರರು ಡಿಎಸ್ಪಿ ಸಹಿತ 8 ಮಂದಿ ಪೊಲೀಸರನ್ನು ಹತ್ಯೆಗೈದಿದ್ದರು.
Next Story