ಆದಿತ್ಯ ಠಾಕ್ರೆ ನಡುವೆ ನಂಟು ಕಲ್ಪಿಸಲು ಪಿತೂರಿ: ಶಿವಸೇನೆ
ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ
ಮುಂಬೈ, ಆ. 5: ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ಹಾಗೂ ರಾಜ್ಯ ಸಚಿವ, ಯುವಸೇನೆ ಅಧ್ಯಕ್ಷ ಆದಿತ್ಯ ಠಾಕ್ರೆ ನಡುವೆ ನಂಟು ಕಲ್ಪಿಸುವ ಪಿತೂರಿ ನಡೆಯುತ್ತಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಬುಧವಾರ ಆರೋಪಿಸಿದ್ದಾರೆ.
ಯಾರದೇ ಹೆಸರನ್ನು ಉಲ್ಲೇಖಿಸದ ರಾವತ್, ರಾಜ್ಯದಲ್ಲಿ ಶಿವಸೇನೆ ನೇತೃತ್ವದ ಸರಕಾರ ಅಧಿಕಾರದಲ್ಲಿರುವ ಸತ್ಯವನ್ನು ಅರಗಿಸಿಕೊಳ್ಳಲು ಪ್ರತಿಪಕ್ಷದವರಿಗೆ ಈಗಲೂ ಆಗುತ್ತಿಲ್ಲ ಎಂದರು.
ಆದಿತ್ಯ ಠಾಕ್ರೆ ಅವರು ಸುಶಾಂತ್ ಸಿಂಗ್ ಠಾಕೂರ್ ಸಾವಿನ ಪ್ರಕರಣದಲ್ಲಿ ಏನು ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.
ಸುಶಾಂತ್ ಸಿಂಗ್ ಠಾಕೂರ್ ಅವರ ಸಾವಿನ ಪ್ರಕರಣವನ್ನು ಆದಿತ್ಯ ಠಾಕ್ರೆ ಅವರೊಂದಿಗೆ ನಂಟು ಬೆಸೆಯಲು ಪ್ರಯತ್ನಿಸುವವರು ಭವಿಷ್ಯದಲ್ಲಿ ಭಾರೀ ಬೆಲೆ ತೆರಲಿದ್ದಾರೆ ಎಂದು ಅವರು ಹೇಳಿದರು.
ನಟ ಸುಶಾಂತ್ ಸಿಂಗ್ ಅವರ ಸಾವಿಗೂ ತನಗೂ ಯಾವುದೇ ಸಂಬಂಧ ಇಲ್ಲ. ಅಲ್ಲದೆ, ತಾನು ಹಾಗೂ ತನ್ನ ಕುಟುಂಬವನ್ನು ಗುರಿ ಮಾಡುವ ಯಾವುದೇ ಕಾರಣ ಇಲ್ಲ ಎಂದು ಆದಿತ್ಯ ಠಾಕ್ರೆ ಹೇಳಿದ್ದಾರೆ.
ಯಾರ ಹೆಸರನ್ನು ಉಲ್ಲೇಖಿಸದ ಅವರು, ಬಾಲಿವುಟ್ ನಟನ ಸಾವಿನಲ್ಲಿ ಕೊಳಕು ರಾಜಕೀಯ ಮಾಡಲಾಗುತ್ತಿದೆ. ರಾಜಕೀಯ ಹತಾಶೆಯಿಂದ ಈ ಆರೋಪ ಮಾಡಲಾಗಿದೆ ಎಂದರು.