ಹಲವರ ಪ್ರಾಣ ಉಳಿಸಿದ ಸ್ಥಳೀಯರಿಗೆ ಸೆಲ್ಯೂಟ್ ಹೊಡೆದ ಪೊಲೀಸ್ ಅಧಿಕಾರಿ: ಫೊಟೊ ವೈರಲ್
ಕೇರಳ ವಿಮಾನ ದುರಂತ
ಕೊಚ್ಚಿ: ಇತ್ತೀಚೆಗೆ ಕೋಯಿಕ್ಕೋಡ್ ನಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಅವಘಡಕ್ಕೀಡಾದ ಸಂದರ್ಭ ಸ್ಥಳಕ್ಕೆ ಧಾವಿಸಿ ಹಲವು ಪ್ರಯಾಣಿಕರ ಪ್ರಾಣ ಉಳಿಸಿದ ಇಲ್ಲಿನ ಸ್ಥಳೀಯ ನಿವಾಸಿಗಳಿಗೆ ಪೊಲೀಸ್ ಅಧಿಕಾರಿಯೊಬ್ಬರು ಸೆಲ್ಯೂಟ್ ಹೊಡೆಯುತ್ತಿರುವ ಫೋಟೊ ವೈರಲ್ ಆಗಿದೆ.
“ಇದೊಂದು ಹೆಮ್ಮೆಯ ದಿನ” ಎಂದು ಸ್ಥಳೀಯರಲ್ಲಿ ಒಬ್ಬರಾದ ಫಝಲ್ ಪುದಿಯಕ್ಕತ್ ಹೇಳುತ್ತಾರೆ.
ಇದು ಪೊಲೀಸ್ ಇಲಾಖೆ ಅಧಿಕೃತವಾಗಿ ಗೌರವ ಸಲ್ಲಿಸಿರುವುದೇ ಎನ್ನುವುದು ತನಗೆ ಇನ್ನೂ ತಿಳಿದಿಲ್ಲ. ಆದರೆ ರಕ್ಷಣಾ ಕಾರ್ಯದಲ್ಲಿ ಭಾಗಿಯಾದ ಸ್ಥಳೀಯರು ಕ್ವಾರಂಟೈನ್ ನಲ್ಲಿದ್ದು, ಅವರನ್ನು ಅಧಿಕಾರಿ ಭೇಟಿಯಾದರು. ಮಾನವೀಯ ಸೇವೆಗಾಗಿ ಧನ್ಯವಾದ ಹೇಳಿದ ಅವರು ಸೆಲ್ಯೂಟ್ ಹೊಡೆದರು ಎಂದವರು ವಿವರಿಸುತ್ತಾರೆ.
ಪೊಲೀಸ್ ಅಧಿಕಾರಿ ಸೆಲ್ಯೂಟ್ ಹೊಡೆಯುತ್ತಿರುವ ಫೊಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
Kerala Police offers a Congratulatory Salute to the Brave Souls who were at the fore front of the rescue operation at the Plane Crash Site and who are under Quarantine currently#Malappuram #Kerala pic.twitter.com/JGdfS4XkMd
— Forum Keralam (FK) (@Forumkeralam1) August 9, 2020