ಉತ್ತರ ಪ್ರದೇಶ: ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ
ಲಕ್ನೊ, ಆ.11: ಇಂದು ಬೆಳಗ್ಗೆ ತನ್ನ ಮನೆ ಸಮೀಪದ ಗದ್ದೆಯಲ್ಲಿ ವಾಕಿಂಗ್ ನಡೆಸುತ್ತಿದ್ದ ಬಿಜೆಪಿಯ ನಾಯಕನೊಬ್ಬನನ್ನು ಗುಂಡಿಟ್ಟು ಸಾಯಿಸಿರುವ ಘಟನೆ ನಡೆದಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಸಂಜಯ್ ಖೋಖರ್ ಪಶ್ಚಿಮ ಉತ್ತರಪ್ರದೇಶದ ಬಾಘ್ಪಾಟ್ನ ಹಳ್ಳಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದ್ದರು.
ಮುಖ್ಯಮಂತ್ರಿ ಆದಿತ್ಯನಾಥ್ ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದು, 24 ಗಂಟೆಯೊಳಗೆ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.
ತನ್ನದೇ ಮಾಲಕತ್ವದ ಹೊಲದಲ್ಲಿ ಬೆಳಗ್ಗಿನ ನಡಿಗೆಯಲ್ಲಿದ್ದ ಸಂಜಯ್ ಮೇಲೆ ಹಲವು ಸುತ್ತಿನ ಗುಂಡು ಹಾರಿಸಲಾಗಿತ್ತು. ರಕ್ತಸಿಕ್ತ ಮೃತದೇಹವು ಕಬ್ಬಿನ ಗದ್ದೆಯ ಸಮೀಪ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸಂಜಯ್ರನ್ನು ಮೂವರು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ ಎಂದು ವರದಿಯಾಗಿದೆ
Next Story