10 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ
ಗರಿಷ್ಠ ಪ್ಯಾಕೇಜ್ಗೆ ಪಂಜಾಬ್, ತಮಿಳುನಾಡು ಬೇಡಿಕೆ
ಹೊಸದಿಲ್ಲಿ,ಆ.11: ಕೋವಿಡ್-19 ಪರಿಸ್ಥಿತಿಯನ್ನು ನಿಭಾಯಿಸುವ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ 10ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಾಸ್ತವ ಸಂವಾದ ನಡೆಸಿದರು.
ಆಂಧ್ರಪ್ರದೇಶ, ಕರ್ನಾಟಕ,ತಮಿಳುನಾಡು, ಪಶ್ಚಿಮಬಂಗಾಳ,ಮಹಾರಾಷ್ಟ್ರ, ಪಂಜಾಬ್, ಬಿಹಾರ,ಗುಜರಾತ್ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿಯೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ತಮಿಳುನಾಡು ಹಾಗೂ ಪಂಜಾಬ್ ಮುಖ್ಯಮಂತ್ರಿಗಳು ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಕೇಂದ್ರದಿಂದ ಗರಿಷ್ಠ ಹಣಕಾಸು ಪ್ಯಾಕೇಜ್ಗಳನ್ನು ಒದಗಿಸುವಂತೆ ಕೇಳಿಕೊಂಡರು.
ಕಳೆದ 24ಗಂಟೆಯಲ್ಲಿ 53,601 ಹೊಸ ಕೊರೋನ ವೈರಸ್ ಕೇಸ್ಗಳು ವರದಿಯಾಗಿದೆ. ಈಮೂಲಕ ಭಾರತದಲ್ಲಿ ಕೊರೋನ ಸೋಂಕಿತರ ಸಂಖ್ಯೆ 22,68,675ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಬೆಳಗ್ಗೆ ತಿಳಿಸಿದೆ.
Next Story