ಅರ್ನಬ್ ವಿರುದ್ಧ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಗೃಹ ಸಚಿವರನ್ನು ಆಗ್ರಹಿಸಿದ ಶಿವಸೇನೆ ಸಂಸದ
'ರಿಪಬ್ಲಿಕ್ ಟಿವಿ' ಮುಖ್ಯ ಸಂಪಾದಕ ಕೈಮುಗಿದು ಕ್ಷಮೆ ಕೋರಬೇಕೆಂದು ಆಗ್ರಹಿಸಿದ ಮತ್ತೊಬ್ಬ ನಾಯಕ
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವು ಪ್ರಕರಣದಲ್ಲಿ ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವರೊಬ್ಬರ ಹೆಸರನ್ನು ಉಲ್ಲೇಖಿಸಿರುವ ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಿವಸೇನೆ ಸಂಸದ ಅರವಿಂದ್ ಸಾವಂತ್ ಅವರು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು ಭೇಟಿಯಾಗಿ ಆಗ್ರಹಿಸಿದ್ದಾರೆ.
ತಾವು ದೇಶಮುಖ್ ಅವರಿಗೆ ಸಲ್ಲಿಸಿದ ಮನವಿ ಪತ್ರ ಹಾಗೂ ಅವರನ್ನು ಭೇಟಿಯಾದ ಸಂದರ್ಭ ತೆಗೆಯಲಾದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಸಾವಂತ್ ಶೇರ್ ಮಾಡಿದ್ದಾರೆ.
ಅರ್ನಬ್ ಗೋಸ್ವಾಮಿ ಅವರು ಸುಶಾಂತ್ ಪ್ರಕರಣದ ಮೀಡಿಯಾ ವಿಚಾರಣೆ ಮೂಲಕ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಮುಂಬೈ ದಕ್ಷಿಣ ಕ್ಷೇತ್ರದ ಸಂಸದರಾಗಿರುವ ಸಾವಂತ್ ಅವರು ಸಚಿವರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.
“ಪತ್ರಿಕೋದ್ಯಮದ ಹೆಸರಿನಲ್ಲಿ ಅರ್ನಬ್ ಅವರು ಸತತವಾಗಿ ಬೇಜವಾಬ್ದಾರಿಯುತವಾಗಿ ಸುದ್ದಿ ಪ್ರಸಾರ ಮಾಡುತ್ತಿದ್ದಾರೆ. ಯಾವುದೇ ಆಧಾರವಿಲ್ಲದೆ ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವರೊಬ್ಬರ ವಿರುದ್ಧ ಆರೋಪಗಳನ್ನು ಹೊರಿಸಿದ್ದಾರೆ'' ಎಂದೂ ಸಾವಂತ್ ದೂರಿದ್ದಾರೆ.
ಟಿವಿ ಶೋ ಒಂದರ ವೇಳೆ ತಮಗೆ ಅವಮಾನಿಸಿದ್ದಾರೆ ಎಂದು ಆರೋಪಿಸಿ ಶಿವಸೇನೆಯ ಇನ್ನೊಬ್ಬ ನಾಯಕ ಕಿಶೋರ್ ತಿವಾರಿ ಅವರು ಕೈಮುಗಿದು ಗೋಸ್ವಾಮಿ ಕ್ಷಮೆ ಕೋರಬೇಕೆಂದು ಆಗ್ರಹಿಸಿದ ಬೆನ್ನಲ್ಲೇ ಮೇಲಿನ ಬೆಳವಣಿಗೆ ನಡೆದಿದೆ. ತಾವು ವಿರೋಧಿಸಿದ ಹೊರತಾಗಿಯೂ ಅರ್ನಬ್ ಅವರು ನ್ಯಾಯಾಂಗ ನಿಂದನೆಗೆ ಕಾರಣವಾಗುವಂತೆ ಸುಶಾಂತ್ ಪ್ರಕರಣದ ಕುರಿತಂತೆ ತಮ್ಮ ವಾದ ಮಂಡಿಸಿದ್ದರು ಎಂದು ತಿವಾರಿ ಆರೋಪಿಸಿದ್ದಾರೆ.
माननीय नामदार श्री. @AnilDeshmukhNCP जी, गृहमंत्री, महाराष्ट्र राज्य यांची भेट घेऊन @republic इंग्रजी आणि @Republic_Bharat या हिंदी वाहिनीचे मुख्य संपादक श्री. अर्णब गोस्वामी यांच्यावर तातडीने कायदेशीर कारवाई करण्याची मागणी केली. @OfficeofUT @AUThackeray pic.twitter.com/WsHT5a1fcq
— Arvind Sawant (@AGSawant) August 18, 2020